ಕಾರು ಹಾಗೂ ನಾಯಿಗೂಡಿಗೆ ಹಾನಿ ಮಾಡಿದ ಕಾಡಾನೆಗಳು

KannadaprabhaNewsNetwork |  
Published : Jul 12, 2024, 01:32 AM IST
11ಎಚ್ಎಸ್ಎನ್6 : ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಕಾಫಿ ಬೆಳೆಗಾರ ದಯಾನಂದ್ ಎಂಬುವರ ನಾಯಿಶೆಡ್ ಕಾಡಾನೆ ದಾಳಿಯಿಂದ ಜಖಂಗೊಂಡಿರುವುದು. | Kannada Prabha

ಸಾರಾಂಶ

ಸಕಲೇಶಪುರ ಸುತ್ತಮುತ್ತ ಮತ್ತೆ ಕಾಡಾನೆಗಳ ಉಪಟಳ ಮಿತಿಮೀರಿದೆ.ಹಲಸುಲಿಗೆ ಗ್ರಾಮದ ದಯಾನಂದ್ ಎಂಬುವರ ಕಾಫಿ ತೋಟ ಹಾಗೂ ಮನೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ವೇಳೆ ಬಂದ ಕಾಡಾನೆಗಳು, ಮನೆಯ ಆವರಣದಲ್ಲಿರುವ ನಾಯಿಶೆಡ್ ಹಾಗೂ ಮನೆಯ ಮುಂದೆ ನಿಲ್ಲಿಸಲಾಗಿದ್ದ ಓಮಿನಿ ಕಾರಿನ ಮೇಲೆ ದಾಳಿ ನಡೆಸಿವೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಹಲಸುಲಿಗೆ ಸುತ್ತಮುತ್ತ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಕಾಡಾನೆಗಳ ದಾಳಿಯಿಂದ ಕಾಫಿ ಬೆಳೆಗಾರರೋರ್ವರ ನಾಯಿಗೂಡು ಹಾಗೂ ಕಾರು ಹಾನಿಗೀಡಾಗಿರುತ್ತದೆ.

ತಾಲೂಕಿನ ಹಲಸುಲಿಗೆ ಗ್ರಾಮದ ದಯಾನಂದ್ ಎಂಬುವರ ಕಾಫಿ ತೋಟ ಹಾಗೂ ಮನೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ವೇಳೆ ಬಂದ ಕಾಡಾನೆಗಳು, ಮನೆಯ ಆವರಣದಲ್ಲಿರುವ ನಾಯಿಶೆಡ್ ಹಾಗೂ ಮನೆಯ ಮುಂದೆ ನಿಲ್ಲಿಸಲಾಗಿದ್ದ ಓಮಿನಿ ಕಾರಿನ ಮೇಲೆ ದಾಳಿ ನಡೆಸಿವೆ. ಇದರಿಂದ ಕಾರಿಗೆ ತುಸು ಹಾನಿಯಾಗಿದ್ದು ನಾಯಿಶೆಡ್ ಬಹುತೇಕ ಜಖಂಗೊಂಡಿದೆ. ಇದೇ ಸಂದರ್ಭದಲ್ಲಿ ಗ್ರಾಮದ ರಮೇಶ್ ಎಂಬುವರ ಕಾರಿನ ಮೇಲೂ ಕಾಡಾನೆಗಳು ದಾಳಿ ನಡೆಸಿವೆ.

ರಾತ್ರಿಯಿಡೀ ಕಾಡಾನೆಗಳು ಮನೆಯ ಆವರಣದಲ್ಲೆ ಇದ್ದಿದ್ದರಿಂದ ಮನೆಯವರು ಭಯದಲ್ಲೆ ರಾತ್ರಿ ಕಳೆದಿದ್ದಾರೆ. ಹಲಸುಲಿಗೆ ಸುತ್ತಮುತ್ತ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತದ ಬೆಳೆಗಳು ಕಾಡಾನೆಗಳ ದಾಂಧಲೆಯಿಂದ ಹಾಳಾಗಿದೆ. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮೀತಿಮೀರಿ ಹೋಗಿದ್ದು, ಕಾಫಿ ತೋಟಗಳ ಮಾಲೀಕರು ಹಾಗೂ ಕಾರ್ಮಿಕರು ಕಾಫಿ ತೋಟಗಳಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

೧೧ಎಸ್.ಕೆ.ಪಿ.ಪಿ ೩

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!