ಚಂದ್ರಶೇಖರ ಶಾರದಾಳ
ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ₹750 ಪ್ರೋತ್ಸಾಹ ಧನ ನೀಡಿ ಖರೀದಿ ಮಾಡಿತ್ತು. ಈ ವರ್ಷ ಕೇಂದ್ರ ಸರ್ಕಾರ ಕೇವಲ 30 ಲಕ್ಷ ಕ್ವಿಂಟಲ್ ಖರೀದಿಗೆ ಮಾತ್ರ ಅನುಮತಿ ನೀಡಿದೆ. ರಾಜ್ಯ ಸರ್ಕಾರದಿಂದ ಈ ವರ್ಷ ಕನಿಷ್ಠ ₹1500 ಪ್ರೋತ್ಸಾಹ ಧನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಲಕ್ಷಾಂತರ ಹೇಕ್ಟರ್ ಭೂಮಿಯಲ್ಲಿ ಬೆಳೆದ ತೊಗರಿ ಬೆಳೆಯು ರೋಗಗಳು ಹಾಗೂ ಹವಾಮಾನ ವೈಪರಿತ್ಯಕ್ಕೆ ಸಂಪೂರ್ಣ ನಲುಗಿ ನಾಶವಾಗಿದೆ. ರಾಜ್ಯ ಸರ್ಕಾರವಾದರೂ ತಮ್ಮ ಸಹಾಯಕ್ಕೆ ನಿಲ್ಲಬಹುದೆಂದು ಅನ್ನುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ.
ಕಳೆದ 2-3 ತಿಂಗಳ ಹಿಂದೆ ತೊಗರಿ ಮಾರುಕಟ್ಟೆ ಬೆಲೆ ಕ್ವಿಂಟಲ್ಗೆ ₹11 ಸಾವಿರ ರವರೆಗೂ ಇತ್ತು. ಆದರೆ ಈಗ ಕೇಂದ್ರ ಸರ್ಕಾರ ₹7,550 ಬೆಂಬಲ ಬೆಲೆ ನಿಗದಿ ಮಾಡಿರುವುದರಿಂದ ಉತ್ತಮ ಗುಣಮಟ್ಟದ ತೊಗರಿಗೆ ಅಂದಾಜು ₹8,000 ಸಮತೋಲನ ಕಾಯ್ದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ₹1,500 ಪ್ರೋತ್ಸಾಹ ಧನ ನಿಗದಿಮಾಡಿದರೆ ₹10 ಸಾವಿರ ರವರೆಗೆ ದರ ನಿಗದಿಯಾದ್ರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು .ಈ ಹಂಗಾಮಿನಲ್ಲಿ ಮಳೆ ಹಾಗೂ ರೋಗಗಳಿಂದಾಗಿ ಇಳುವರಿ ಪ್ರಮಾಣವು ಕಡಿಮೆಯಾಗಿದೆ. ಇತ್ತ ಕಿರಾಣಿ ಅಂಗಡಿಗಳಲ್ಲಿ ತೊಗರಿ ಬೇಳೆ ಬೆಲೆ ಕೆಜಿಗೆ ₹200 ವರೆಗೂ ಆಗಿರುವುದಕ್ಕೆ ಗ್ರಾಹಕರೂ ಕೂಡ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ರೈತರಿಗೆ ಅನ್ಯಾಯವಾಗದಂತೆ ಬೆಂಬಲ ಬೆಲೆ ಘೊಷಿಸಬೇಕೆಂದು ತೊಗರಿಬೆಳೆ ಬೆಳೆಯುವ ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಚಂದ್ರಶೇಖರ ಹಡಪದ, ಭಾರತೀಯ ಕಿಸಾನ ಸಂಘ ತಾಲೂಕು ಅಧ್ಯಕ್ಷರು ಬಾಗಲಕೋಟೆ
ಲಕ್ಷ್ಮಣಗೌಡ ಪಾಟೀಲ, ಶಾರದಾಳ ಗ್ರಾಮದ ರೈತ