ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿನ ವಿರಕ್ತ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಸಂಗಮನಾಥ ಸ್ವಾಮೀಜಿ 62ನೇ ವರ್ಷದ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಚನ್ನಬಸವ ಸ್ವಾಮೀಜಿ 17ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನದಲ್ಲಿ ಮಾತನಾಡಿ ರಾಜ್ಯ ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದು ತಾಲೂಕಿನ ಅಡಿಕೆ ಬೆಳೆಗಾರ ರೈತರು ತಮ್ಮ ತೋಟಗಳ ಉಳಿಸಿಕೊಳ್ಳಲು ಹೋರಾಡುತ್ತಿದ್ದು ಇದನ್ನು ಗಮನಿಸಿ ವಿಧಾನಸಭೆ ಅಧಿವೇಶನ ಬದಲು ತಾಲೂಕಿನ ಜನರಿಗೆ ನೀರು ತರುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರ ಕಚೇರಿಗಳಿಗೆ ತೆರಳಿ ಪರಿಹಾರ ಕಲ್ಪಿಸಲು ಯತ್ನಿಸುತ್ತೇದ್ದೇನೆ. ಮುಂದಿನ 2-3 ದಿನಗಳಲ್ಲಿ ತಾಲೂಕಿನ ರೈತರಿಗೆ ನೀರು ಸಿಗುವಂತೆ ಮಾಡುತ್ತೇನೆ ಎಂದರು. ವಿರೂಪಾಕ್ಷಪ್ಪರ ಸಲಹೆಯಂತೆ ಭದ್ರಾ ನಾಲೆಯಲ್ಲಿ 200ರಿಂದ 300ಕ್ಯೂಸೆಕ್ ನೀರು ಹೆಚ್ಚುವರಿ ಬಿಡಿಸಿ ಕೊನೆಯ ಭಾಗದ ರೈತರು ಸೇರಿದಂತೆ ಎಲ್ಲಾ ರೈತರಿಗೂ ನೀರು ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಅಧಿಕಾರ ಇದ್ದಾಗ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜರ ಮೇಲಿದೆ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಆತ್ಮೀಯರಾದ ಶಾಸಕ ಬಸವರಾಜ್ ಮಾತುಕತೆ ನಡೆಸಿ ಉಬ್ರಾಣಿ ಏತ ನೀರಾವರಿ ಯೋಜನೆಗೆಯ ಕೆರೆಗಳ ತುಂಬಿಸಲು ಅವರಿಂದ ಅನುಮತಿ ಪಡೆದು ನೀರು ಬಿಡಿಸಬೇಕು. ನಾನು ಶಾಸಕನಾಗಿದ್ದಾಗ ಬರಗಾಲದ ಸಂದರ್ಭದಲ್ಲಿ ಜೂನ್ ತಿಂಗಳವರೆಗೂ ಏತ ನೀರಾವರಿ ಯೋಜನೆ ನೀರು ಬಿಡಿಸಿದ್ದೆ ಎಂದರು.ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ ನನ್ನ ಪ್ರಕಾರ ಸೇವೆ ಪ್ರಮುಖವಾಗಿ ಇಟ್ಟುಕೊಳ್ಳುವುದು ರಾಜಕಾರಣ. ಸೇವೆ ಹೊರತುಪಡಿಸಿ ಬೇರೆ ಉದ್ದೇಶವಿಟ್ಟುಕೊಂಡರೆ ಅದನ್ನು ದಂಧೆ ಎನ್ನಬಹುದು, ಚುನಾವಣೆಗಳಲ್ಲಿ ಗೆಲುವು, ಸೋಲು ಮುಖ್ಯವಲ್ಲ ಜನರೊಂದಿಗೆ ನಿಕಟ ಸಂಪರ್ಕ ಹೊಂದಿ ಜನರಿಗೆ ಪ್ರೀತಿ ಹಂಚುವುದು ರಾಜಕಾರಣ ಎಂದರು. ರಾಜಕಾರಣಿಗಳು ಸಂತೋಷ, ಸಮಾಧಾನ, ಶಾಂತಿಯಿಂದ ಇದ್ದಾಗ ಮಾತ್ರ ಜನರಿಗೆ ಪ್ರೀತಿ ಹಂಚಲು ಸಾಧ್ಯ ಯಾವುದೇ ಸರ್ಕಾರಗಳು ಉಚಿತವಾಗಿ ಏನನ್ನೇ ನೀಡದರೂ ಅದು ಜನರ ದಾರಿತಪ್ಪಿಸುವ ಒಂದು ಮಾರ್ಗವಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ಶ್ರೀಮಠದ ಡಾ.ಗುರುಬಸವ ಸ್ವಾಮೀಜಿ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದರು. ಬಾಲ್ಕಿಯ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ ದೇವರು ಸಾನ್ನಿಧ್ಯ ವಹಿಸಿದ್ದರು. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳಿದ್ದರು.
ರೈತರಿಗೆ ತೊಂದರೆಯಾಗದಂತೆ ಶಾಸಕರು ಗಮನಹರಿಸಲಿ