ಎಚ್.ಕೆ.ಅಶ್ವಥ್ ಹಳುವಾಡಿ
ಜಿಲ್ಲೆಯಲ್ಲಿ ಹಿಂಗಾರು ಮಳೆ ಚುರುಕುಗೊಂಡಿದೆ. ಮಳೆಯಿಂದ ೨೭ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದರೆ, ಜಿಲ್ಲೆಯ ಬಹುತೇಕ ಕೆರೆಗಳು ನೀರಿನಿಂದ ಮೈದುಂಬಿಕೊಂಡಿವೆ. ಹಿಂಗಾರು ಮಳೆ ವಾಡಿಕೆಗಿಂತ ಶೇ.೧೪ರಷ್ಟು ಹೆಚ್ಚುವರಿ ಮಳೆಯಾಗುವುದರೊಂದಿಗೆ ರೈತರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯ ನಾಗಮಂಗಲ, ಮಳವಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಮದ್ದೂರು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಉಳಿದಂತೆ ಕೆ.ಆರ್.ಪೇಟೆ, ಪಾಂಡವಪುರ, ಮಂಡ್ಯ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಕಂಡುಬಂದಿದೆ.ಹಿಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ೨೭ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಮದ್ದೂರು ತಾಲೂಕಿನಲ್ಲಿ ೧, ಮಳವಳ್ಳಿ-೧, ಪಾಂಡವಪುರ -೫, ನಾಗಮಂಗಲ-೧೩, ಕೆ.ಆರ್.ಪೇಟೆ-೩ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೪ ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನೂ ಈ ಮನೆಗಳಿಗೆ ಜಿಲ್ಲಾಡಳಿತ ಯಾವುದೇ ಪರಿಹಾರವನ್ನು ನೀಡಿಲ್ಲದಿರುವುದು ಕಂಡುಬಂದಿದೆ.
ಹಿಂಗಾರು ಮಳೆಯಿಂದ ಯಾವುದೇ ಮಾನವ, ಪ್ರಾಣಿಗಳ ಜೀವಕ್ಕೆ ಅಪಾಯವಾಗಿಲ್ಲ. ಜೊತೆಗೆ ಬೆಳೆಗಳಿಗೂ ಯಾವುದೇ ವಿಧವಾದ ಹಾನಿ ಉಂಟಾಗಿಲ್ಲ. ರಸ್ತೆಗಳು, ಸೇತುವೆ, ಸಂಪರ್ಕ ರಸ್ತೆ ಸೇರಿದಂತೆ ಇನ್ನಾವುದೇ ಮೂಲಸೌಲಭ್ಯಗಳಿಗೂ ಧಕ್ಕೆಯಾಗಿಲ್ಲ ಎಂದು ತಿಳಿದುಬಂದಿದೆ.
ಕೆಆರ್ಎಸ್ ಜಲಾಶಯದಲ್ಲೂ ಪೂರ್ಣ ಪ್ರಮಾಣದ ನೀರಿದ್ದು, ೮೬೪೭ ಕ್ಯುಸೆಕ್ ಒಳಹರಿವಿದ್ದರೆ, ೭೩೧೯ ಕ್ಯುಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದ್ದರೆ, ನಾಲೆಗಳಿಗೆ ೧೦೬೮ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
(೧.೧೦.೨೦೨೪ರಿಂದ ಈ ದಿನದವರೆಗೆ)
ಕೆ.ಆರ್.ಪೇಟೆ೧೧೬.೫೯೩.೪-೨೦
ಮಳವಳ್ಳಿ ೯೪.೬೧೬೨.೦೭೧
ನಾಗಮಂಗಲ೧೦೭.೨೧೨೫.೪೪೨
ಪಾಂಡವಪುರ೧೦೬.೬೭೦.೦-೩೪ಶ್ರೀರಂಗಪಟ್ಟಣ೮೮.೦೮೮.೦೦
ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.80 ಅಡಿ
ಒಳ ಹರಿವು – 17,299 ಕ್ಯುಸೆಕ್ಹೊರ ಹರಿವು – 17,039 ಕ್ಯುಸೆಕ್
ನೀರಿನ ಸಂಗ್ರಹ – 49.452 ಟಿಎಂಸಿ