ಕನ್ನಡಪ್ರಭ ವಾರ್ತೆ ಬಂಗಾರಪೇಟೆ
₹ ೪.೫೫ ಕೋಟಿ ಸಾಲ ಬಾಕಿ
ನೀಡಿರುವಂತಹ ಸಾಲದಲ್ಲಿ ಇನ್ನೂ ಸಹ ೪.೫೫ ಕೋಟಿ ರೂಗಳು ಮರುಪಾವತಿ ಬಾಕಿ ಇದೆ. ಜೊತೆಗೆ ರೈತರ ಕೃಷಿ ಸಾಲಕ್ಕೆ ನೀಡಿರುವ ೨.೪೯ ಕೋಟಿ ಸಹ ಬಾಕಿ ಇದೆ. ಇದರಿಂದಾಗಿ ಸಂಘದ ಅಭಿವೃದ್ದಿ ಕುಂಠಿತಗೊಂಡಿದ್ದು, ಆದಾಯವೂ ಕಡಿಮೆಯಾಗಿದೆ. ಸರ್ಕಾರದಿಂದ ಸಾಲ ಮನ್ನಾ ಆಗುತ್ತದೆ ಎಂಬ ಉದ್ದೇಶವನ್ನು ಹೊಂದಿರುವಂತಹ ಕೆಲವರು ಸಾಲವನ್ನು ಮರುಪಾವತಿ ಮಾಡುತ್ತಿಲ್ಲ. ಜೊತೆಗೆ ಡಿಸಿಸಿ ಬ್ಯಾಂಕ್ ನಿಂದ ಇತ್ತೀಚೆಗೆ ಸಾಲವನ್ನು ನೀಡದ ಪರಿಣಾಮ ಮುಂದೆ ಸಾಲಗಳು ವಿತರಣೆ ಆಗುವುದಿಲ್ಲ ಎಂಬ ಉದ್ದೇಶದಿಂದಲೂ ಸಾಲ ಮರುಪಾವತಿ ಮಾಡಲು ಮಹಿಳೆಯರು ಮುಂದಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.ಆದರೆ ಯಾವುದೇ ಕಾರಣಕ್ಕೂ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಗಳು ಇಲ್ಲ. ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರು ನೇಮಕವಾದರೆ ಸಾಲಗಳು ದೊರೆಯಲಿದ್ದು, ಬಾಕಿ ಉಳಿಸಿಕೊಂಡಿರುವಂತಹ ಹಣವನ್ನು ಮರುಪಾವತಿ ಮಾಡಿದರೆ ಸಂಘ ಅಭಿವೃದ್ದಿ ಆಗುತ್ತದೆ ಅದರೊಟ್ಟಿಗೆ ಇತರರಿಗೂ ಸಾಲವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಶೀಘ್ರದಲ್ಲೇ ಅಧ್ಯಕ್ಷರ ನೇಮಕಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್ ರಂಗನಾಥಾಚಾರಿ ಮಾತನಾಡಿ, ಸಂಘದಲ್ಲಿ ಈ ವರ್ಷ ವ್ಯವಹಾರ ಕಡಿಮೆಯಾದ ಕಾರಣ ಕೇವಲ ೧.೫೬ ಲಕ್ಷ ಮಾತ್ರ ಲಾಭ ಬಂದಿದೆ. ಡಿಸಿಸಿ ಬ್ಯಾಂಕಿನ ಚುನಾವಣೆ ನಡೆದಿದ್ದು, ಅಧ್ಯಕ್ಷರ ನೇಮಕ ಆಗದ ಕಾರಣ ಸಂಘಗಳಿಗೆ ಮತ್ತು ರೈತರಿಗೆ ಸಾಲವನ್ನು ನೀಡಲು ಸಾಧ್ಯವಾಗಲಿಲ್ಲ. ಆದಷ್ಟು ಬೇಗ ಅಧ್ಯಕ್ಷರನ್ನು ನೇಮಕ ಮಾಡಿ ಸಾಲವನ್ನು ನೀಡಲಾಗುತ್ತದೆ. ಅಲ್ಲಿಯವರೆಗೂ ಸಂಘದಿಂದ ಸಾಲ ನೀಡಿರುವ ಹಣದ ಪೈಕಿ ಸುಮಾರು ೭ ಕೋಟಿ ರುಗಳ ಸಾಲ ಹಣ ಜನರಲ್ಲಿ ಇರುವುದರಿಂದ ಅದನ್ನು ಪಾವತಿ ಮಾಡಿಕೊಂಡು ಸಾಲವನ್ನು ವಿತರಣೆ ಮಾಡಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಬುಗೌಡ, ಟಿವಿ ವೆಂಕಟೇಶ್, ಜಿಎಂ.ಶ್ರೀನಿವಾಸ್, ಸಿ.ವೆಂಕಟೇಶ್, ವಿ.ನಾರಾಯಣಸ್ವಾಮಿ, ಲಕ್ಷ್ಮಮ್ಮ, ನಟರಾಜ್ ಮಾಜಿ ಅಧ್ಯಕ್ಷರಾದ ಜೆಸಿಬಿ ನಾರಾಯಣಪ್ಪ, ತಿಪ್ಪಾರೆಡ್ಡಿ, ಪ್ರಭಾರಿ ಕಾರ್ಯದರ್ಶಿ ವಿ.ಶ್ರೀನಿವಾಸ್, ಕೋದಂಡರಾಮಯ್ಯ ಮುಂತಾದವರು ಹಾಜರಿದ್ದರು.