ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಐಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 7ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಮಹಿಳೆಯರು ಯುವಜನರು ಮತ್ತು ದುರ್ಬಲ ವರ್ಗಗಳಿಗೆ ಸಹಕಾರಿ ಸಂಸ್ಥೆಗಳು’ ಕುರಿತು ಅವರು ಮಾತನಾಡಿದರು.
ಐಗೂರು ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರಿ ಯೂನಿಯನ್, ರಾಜ್ಯ ಸಹಕಾರ ಮಂಡಳಿ, ಸಹಕಾರ ಇಲಾಖೆ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.ವೇಗವಾದ ಡಿಜಿಟಲೀಕರಣದಿಂದ ಪ್ರಪಂಚ ಬೆಳೆಯುತ್ತಿದ್ದು, ಭಾರತ ದೇಶ ಆಧುನಿಕ ಜಗತ್ತಿನೊಂದಿಗೆ ಸ್ಪರ್ಧೆಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರನ್ನು ತೊಡಗಿಸಿಕೊಳ್ಳಲು ಅನುದಾನ ನೀಡುತ್ತಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ, ಮಾಜಿ ನಿರ್ದೇಶಕ ಎಂ.ಎಸ್.ಮುತ್ತಪ್ಪ, ಕೆ.ಸಿ.ರಾಧ, ಡಿ.ಎಸ್.ಪೊನ್ನಪ್ಪ, ಎಂ.ಬಿ.ಪೂವಯ್ಯ, ಜಿ.ಎಂ.ಮುತ್ತಪ್ಪ, ಎಂ.ಪಿ.ಕುಶಾಲಪ್ಪ, ಎಲ್.ಎಂ.ಮಾದಪ್ಪ ಹಾಗೂ ಬಿ.ಎಸ್.ಪೂವಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಶಿವಕುಮಾರ್ ಸಹಕಾರಿ ಕ್ಷೇತ್ರದ ದುಡಿದ ಎಲ್ಲಾ ಸಹಕಾರಿಗಳನ್ನು 2026 ರ ಸಂಘದ ಸುವರ್ಣ ಮಹೋತ್ಸವದಲ್ಲಿ ಸನ್ಮಾನಿಸಲಾಗುವುದು. ರಾಜಕೀಯ ರಹಿತವಾಗಿ ಸಂಘ ಕೆಲಸ ನಿರ್ವಹಿಸುತ್ತಿದೆ. ಮುಂದಿನ ದಿನದಲ್ಲಿ ಐಗೂರಿನಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲಾಗುವುದು ಎಂದರು.
ಮಡಿಕೇರಿ ಸಹಕಾರಿ ತರಬೇತಿ ಕೇಂದ್ರ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ಮಾತನಾಡಿ, ಸಹಕಾರಿ ಕ್ಷೇತ್ರ ಹಸಿವು ಮುಕ್ತ ಬದುಕಿಗೆ ಒತ್ತು ನೀಡುತ್ತಿದೆ. ಪ್ರತಿಯೊಬ್ಬ ಪ್ರಜೆಯನ್ನೂ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ಯೂನಿಯನ್ ವ್ಯವಸ್ಥಾಪಕಿ ವಂದಿಸಿದರು.