)
ಸಾಮಾಜಿಕ, ಆರ್ಥಿಕ ಕಾರ್ಯಾಗಾರದಲ್ಲಿ ಪಿಎಸ್ಐ ಲೀಲಾವತಿ
ಮಹಿಳೆಯರು ಸೈಬರ್ ಅಪರಾಧಗಳ ಪ್ರಕರಣಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಪಿಎಸ್ಐ ಲೀಲಾವತಿ ತಿಳಿಸಿದರು.
ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗ್ರಾಮೀಣ ಕೂಟ ಹಾಗೂ ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಷನ್ ನಿಂದ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಕಾರ್ಯಾಗಾರದಲ್ಲಿ ಕಾನೂನು ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ.ವಂಚಕರು ವೃದ್ಧರು, ಮಹಿಳೆಯರ ಅಸಹಾಯಕತೆ ಹಾಗೂ ಅರಿವಿನ ಕೊರತೆ ಬಳಸಿಕೊಂಡು ಅವರನ್ನು ಸುಲಿಗೆ ಮಾಡು ವುದು ಸಾಮಾನ್ಯ ಎಂಬಂತೆ ಆಗುತ್ತಿದೆ. ಮೊಬೈಲ್ ಮೂಲಕ ಜಾಲತಾಣಗಳ ದುರ್ಬಳಕೆ, ಒಟಿಪಿ ಮೂಲಕ ವಂಚಿಸ ಲಾಗುತ್ತಿದೆ. ಈ ಬಗ್ಗೆ ಎಚ್ಚರವಿರಲಿ ತೊಂದರೆ ಸಂಭವಿಸಿದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಸಹಾಯವಾಣಿ 1930 ಸಂಪರ್ಕಿಸಲು ಸಲಹೆ ನೀಡಿದರು.
ಸಂಸ್ಥೆ ಕಳೆದ 27 ವರ್ಷಗಳಿಂದ 17 ರಾಜ್ಯಗಳಲ್ಲಿ 45 ಲಕ್ಷಕ್ಕೂ ಅಧಿಕ ಸದಸ್ಯರು, 22 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಸಾಲ ಸೌಲಭ್ಯದ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಹಾಗೂ ಸಾಮಾಜಿಕ ಕಳಕಳಿ ಮೂಡಿಸಿ ನೆರವು ನೀಡಲಾಗುತ್ತಿದೆ. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬಾಲಕಿ ಯರಿಗೆ ಪುರಸ್ಕಾರ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ ಒದಗಿಸಲಾಗುತ್ತಿದೆ ಎಂದರು.
22 ಕೆಡಿಆರ್2