ಸಂಸ್ಕಾರ, ಸಂಸ್ಕೃತಿ ಜಾಗೃತಗೊಳಿಸುವ ಕಲೆ ಯಕ್ಷಗಾನ: ಡಾ.ರಾಘವೇಂದ್ರ ರಾವ್

KannadaprabhaNewsNetwork |  
Published : Jan 28, 2024, 01:22 AM IST
ಹಿರಿಯ ಭಾಗವತ ಕಲಾಕೇಂದ್ರದ ಹಿಂದಿನ ವಿದ್ಯಾರ್ಥಿ ನಾರಾಯಣ ಶಬರಾಯರಿಗೆ ‘ನಮ್ಮ ಕಾಳಿಂಗ’ ಪ್ರಶಸ್ತಿ ಪ್ರದಾನಿಸಲಾಯಿತು. | Kannada Prabha

ಸಾರಾಂಶ

ಯಕ್ಷಗಾನ ಕಲಾಕೇಂದ್ರ ತನ್ನ ಐವತ್ತರ ಸಂಭ್ರಮದಲ್ಲಿ ಹಮ್ಮಿಕೊಂಡ ಯಕ್ಷ ಸಪ್ತೋತ್ಸವ-೨೦೨೪ ಹಾಗೂ ಹಿರಿಯರ ನೆನಪು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ರಾಘವೇಂದ್ರ ರಾವ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆಸಂಸ್ಕಾರವನ್ನು ಜಾಗೃತ ಮಾಡುವ, ದ್ವೇಷ ದೂರಮಾಡಿ ಸಮಚಿತ್ತದಿಂದ ಬದುಕುವಂತಾಗಬೇಕೆಂಬ ಮೂಲ ಉದ್ದೇಶದಿಂದ ಪ್ರಾರಂಭವಾದ ಕಲೆಯೇ ಯಕ್ಷಗಾನ ಎಂದು ಸಂಸ್ಕೃತ ಪ್ರಾಧ್ಯಾಪಕ ಡಾ.ರಾಘವೇಂದ್ರ ರಾವ್ ಹೇಳಿದರು.

ಅವರು ಯಕ್ಷಗಾನ ಕಲಾಕೇಂದ್ರ ತನ್ನ ಐವತ್ತರ ಸಂಭ್ರಮದಲ್ಲಿ ಹಮ್ಮಿಕೊಂಡ ಯಕ್ಷ ಸಪ್ತೋತ್ಸವ-೨೦೨೪ ಹಾಗೂ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಿಂಗ ನಾವಡ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಕಾರ್ಕಡ ರಾಜು ಪೂಜಾರಿ ವಹಿಸಿದ್ದರು.

ವೇದಿಕೆಯಲ್ಲಿ ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತ ರಮೇಶ ನಾಯಕ್ ತೆಕ್ಕಟ್ಟೆ, ಬೆಳ್ವೆ ಸತೀಶ ಕಿಣಿ, ಗಣಪಯ್ಯ ನಾವಡ ಉಪಸ್ಥಿತರಿದ್ದರು.

ಕಾಳಿಂಗ ನಾವಡ ಸ್ಮರಣೆಯಲ್ಲಿ ಹಿರಿಯ ಭಾಗವತ ಕಲಾಕೇಂದ್ರದ ಹಿಂದಿನ ವಿದ್ಯಾರ್ಥಿ ನಾರಾಯಣ ಶಬರಾಯರಿಗೆ ‘ನಮ್ಮ ಕಾಳಿಂಗ’ ಪ್ರಶಸ್ತಿ ಪ್ರದಾನಿಸಲಾಯಿತು. ಬಿಲಿಯನೇರ್ ರೈತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ತೆಕ್ಕಟ್ಟೆ ರಮೇಶ ನಾಯಕರನ್ನು ಅಭಿನಂದಿಸಲಾಯಿತು.

ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗುಂಡ್ಮಿ ರಾಮಚಂದ್ರ ಐತಾಳ ಸನ್ಮಾನಿತರ ಪರಿಚಯ ಮಾಡಿದರು. ಸುಮನ ಹೇರ್ಳೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಅಕ್ಷಯ ಶಾಸ್ತ್ರಿ ಬಳಗದವರಿಂದ ಸ್ವರನಾದ ಸಿಂಚನ, ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ನಂತರ ಕೊಂಡದಕುಳಿ ರಾಮಚಂದ್ರ ಹೆಗಡೆ ಸಂಯೋಜನೆಯಲ್ಲಿ ವಿಭೀಷಣ ನೀತಿ ಮತ್ತು ಕೈಕಸಾ ನೀತಿ ಯಕ್ಷಗಾನ ಪ್ರದರ್ಶನ ಪ್ರದರ್ಶನಗೊಂಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೆ ನನ್ನ ವಿರುದ್ಧವೂ ಕ್ರಮ ಆಗಲಿ: ಜಮೀರ್‌
ಈಗಾಗಲೇ ಸಾಕಷ್ಟು ಅನುಭವಿಸಿದ್ದೇವೆ, ಜಮೀರ್‌ರನ್ನು ಮತ್ತೆ ಸೇರ್ಸಿಕೊಳ್ಳಲ್ಲ: ಎಚ್ಡಿಕೆ