ಬೆನ್ನುನೋವಿಗೆ ಯೋಗ ಚಿಕಿತ್ಸೆಯಿಂದ ಪರಿಹಾರ ಸಾಧ್ಯ: ಡಾ.ರಾಘವೇಂದ್ರ ಗುರೂಜಿ

KannadaprabhaNewsNetwork |  
Published : Jun 29, 2024, 12:44 AM ISTUpdated : Jun 29, 2024, 11:53 AM IST
ಕ್ಯಾಪ್ಷನಃ25ಕೆಡಿವಿಜಿ31ಃದಾವಣಗೆರೆಯಲ್ಲಿ ನಡೆದ ಭಾವಸಾರ ವಿಷನ್ ಇಂಡಿಯಾ ವಲಯದ ಮಾಸಿಕ ಮಹಾಸಭೆಯಲ್ಲಿ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿಯವರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಬೆನ್ನುನೋವಿಗೆ ಮುಖ್ಯ ಕಾರಣ ಇಂದಿನ ಆಧುನಿಕ ಜೀವನಶೈಲಿ ಮಾರ್ಪಾಡುಗಳೇ ಕಾರಣ. ಆಧುನಿಕ ಜೀವನಶೈಲಿಗೆ ಮೊರೆಹೋಗಿ ಶರೀರಕ್ಕೆ ಸರಿಯಾದ ವ್ಯಾಯಾಮ ಕೊಡದೇ ಜನರು ಸುಖಃ ಭೋಗಗಳಿಗೆ ದಾಸರಾಗಿದ್ದಾರೆ. ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಶೇ.60 ರಿಂದ 80 ಭಾಗಶಃ ಮಕ್ಕಳಾದಿಯಾಗಿ ವಯೋವೃದ್ಧರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ಜೆ.ಪಿ. ಸಭಾಂಗಣದಲ್ಲಿ ಭಾವಸಾರ ವಿಷನ್ ಇಂಡಿಯಾ ವಲಯ-102 ವತಿಯಿಂದ ಆಯೋಜಿಸಿದ್ದ ಮಾಸಿಕ ಮಹಾಸಭೆಯಲ್ಲಿ “ಕಾಡುವ ಬೆನ್ನುನೋವು: ಇದಕ್ಕಿದೆ ಯೋಗ ಚಿಕಿತ್ಸೆಯಲ್ಲಿ ಪರಿಹಾರ” ಎಂಬ ವಿಷಯದ ಉಪನ್ಯಾಸ ನೀಡಿದರು. 

ಬೆನ್ನುನೋವಿಗೆ ಮುಖ್ಯ ಕಾರಣ ಇಂದಿನ ಆಧುನಿಕ ಜೀವನಶೈಲಿ ಮಾರ್ಪಾಡುಗಳೇ ಕಾರಣ. ಆಧುನಿಕ ಜೀವನಶೈಲಿಗೆ ಮೊರೆಹೋಗಿ ಶರೀರಕ್ಕೆ ಸರಿಯಾದ ವ್ಯಾಯಾಮ ಕೊಡದೇ ಜನರು ಸುಖಃ ಭೋಗಗಳಿಗೆ ದಾಸರಾಗಿದ್ದಾರೆ. ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಸಂದೀಪ್ ವದೋನಿ, ಕಾರ್ಯದರ್ಶಿ ರಮೇಶ ಬಾಬು ಗುಜ್ಜರ್, ಅನಿಲ್ ಕುಮಾರ ಮಾಲದಕರ್, ಇತರರು ಇದ್ದರು. ಓಂಕಾರ್ ಪ್ರಾರ್ಥಿಸಿದರೆ, ಭಾವಸಾರ್ ಮಿಷನ್ ಇಂಡಿಯಾ ವಲಯದ ಜಿಲ್ಲಾಧ್ಯಕ್ಷೆ ಸರಳ ಆಮ್ಟೆ ಸ್ವಾಗತಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಮಹಾಂತೇಶ್, ಅಶ್ವಿನಿ ವದೋನಿ, ಯೋಗಿಕ್, ವಿ.ಕೆ.ರಾಹುಲ್ ಕೆಲವು ಚಿಕಿತ್ಸೆಯ ಭಂಗಿಯ ಆಸನಗಳನ್ನು ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!