ಯುವ ವೈದ್ಯರು ಐಎಂಎದಲ್ಲಿ ಸಂಘಟಿತರಾಗಲಿ: ಟಿ. ವೀರಭದ್ರಯ್ಯ

KannadaprabhaNewsNetwork |  
Published : Jan 20, 2026, 02:30 AM IST
ಕಾರ್ಯಕ್ರಮವನ್ನು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ವೈದ್ಯರ ಮೇಲೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳನ್ನು ರಾಜ್ಯ ಐಎಂಎ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಕ್ರಮ ಜರುಗಿಸಲಾಗಿದೆ.

ಗದಗ: ರಾಜ್ಯದಲ್ಲಿ ಯುವ ವೈದ್ಯರನ್ನು ಐಎಂಎ ಸಂಘಟನೆಯಲ್ಲಿ ಒಗ್ಗೂಡಿಸಿ ವೈದ್ಯಕೀಯದಲ್ಲಿ ಸಾಧನೆ ಹಾಗೂ ಅವರನ್ನು ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡಲು ಅಣಿಗೊಳಿಸಬೇಕಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ತಿಳಿಸಿದರು.ನಗರದ ಲಯನ್ಸ್ ಸ್ಕೂಲ್ ಪ್ರಾಂಗಣದಲ್ಲಿ ಗದಗ ಐಎಂಎ ಶತಮಾನೋತ್ಸವದ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ವೈದ್ಯರನ್ನು ಐಎಂಎ ಕಡೆ ಆಕರ್ಷಿತರನ್ನಾಗಿಸಿ ಅವರು ಐಎಂಎ ಸದಸ್ಯರನ್ನಾಗಿಸುವ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆಗೆ ಒಳಪಡಿಸಲು ಹಿರಿಯ ವೈದ್ಯರು ಪ್ರೇರಣೆ ನೀಡಬೇಕು. ಕೆಎಸ್‌ಎಸ್‌ಎಸ್ ಯೋಜನೆಯಡಿ ವೈದ್ಯರ ಅವಲಂಬಿತರಿಗೆ ₹1 ಕೋಟಿಯವರೆಗೆ ಪರಿಹಾರವಿದೆ ಎಂದರು.ರಾಜ್ಯದಲ್ಲಿ ವೈದ್ಯರ ಮೇಲೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳನ್ನು ರಾಜ್ಯ ಐಎಂಎ ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಕ್ರಮ ಜರುಗಿಸಲಾಗಿದೆ. 1926ರ ಡಿಸೆಂಬರ್‌ನಲ್ಲಿ ಗದಗ ಐಎಂಎ ಪ್ರಾರಂಭಗೊಂಡು ಕಳೆದ ೧೦೦ ವರ್ಷಗಳವರೆಗೆ ಕ್ರಿಯಾಶೀಲತೆಯಿಂದ ಕಾರ್ಯ ಮಾಡಿಕೊಂಡು ಬಂದಿದೆ. ಶತಮಾನೋತ್ಸವದ ಸಂಭ್ರಮದಲ್ಲಿ ಜನಮುಖಿ, ಸಮಾಜಮುಖಿಯ ಹಲವಾರು ರಚನಾತ್ಮಕ ಕಾರ್ಯಯೋಜನೆಗಳನ್ನು ಡಾ. ಶ್ರೀಧರ ಕುರಡಗಿ ಅವರ ನೇತೃತ್ವದ ತಂಡ ಸೇವೆಗೆ ಸನ್ನದ್ಧಗೊಂಡಿದೆ. ಗದುಗಿನ ಐವರು ಹಿರಿಯ ವೈದ್ಯರು ರಾಜ್ಯ ಐಎಂಎ ಅಧ್ಯಕ್ಷರಾಗಿ ಇದು ವರೆಗೆ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೂ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಶ್ರೇಯಸ್ಸು ಗದುಗಿಗೆ ಸಲ್ಲುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಐಎಂಎ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಮಾತನಾಡಿ, ಶತಮಾನೋತ್ಸವ ಕೇವಲ ಕಾಟಾಚಾರಕ್ಕೆ ಆಗದಂತೆ ರಚನಾತ್ಮಕ ಕಾರ್ಯ ಮಾಡಲು ಹಿರಿಯ ವೈದ್ಯರ ಸಲಹೆಯೊಂದಿಗೆ 2026ರ ವರ್ಷದಾದ್ಯಂತ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿದ್ದು, ಹಂತ- ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ತಾಲೂಕಿನ ಪಾಪನಾಶಿ ತಾಂಡಾವನ್ನು ದತ್ತು ಗ್ರಾಮವನ್ನಾಗಿ ಪಡೆದು ಜನರ ಆರೋಗ್ಯ ಸುಧಾರಣೆಗೆ ಕ್ರಮ, ಜಿಲ್ಲೆಯ ಪತ್ರಕರ್ತರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದವರಿಗೆ ಸಮಗ್ರ ಆರೋಗ್ಯ ತಪಾಸಣೆ ಕೈಗೊಂಡು ಅಗತ್ಯವಿದ್ದವರಿಗೆ ರಿಯಾಯ್ತಿಯಲ್ಲಿ ಚಿಕಿತ್ಸೆ, ಮಹಿಳೆಯರನ್ನು ಬಹುವಾಗಿ ಕಾಡುವ ಗರ್ಭಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಸೇರಿದಂತೆ ಮುಂತಾದ ಯೋಜನೆ ರೂಪಿಸಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಗದುಗಿನ ಹಿರಿಯ ಕಿರಿಯ ತಜ್ಞ ವೈದ್ಯರ ತಂಡ ಸಾಥ್ ನೀಡುವರು ಎಂದರು.ಐಎಂಎ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಆರ್.ಎಸ್. ಪವಾಡಶೆಟ್ಟರ, ಡಾ. ಚಂದ್ರಶೇಖರ ಬಳ್ಳಾರಿ, ಡಾ. ಸಪ್ನಾ ಶಿರೋಳ, ಡಾ. ಜ್ಯೋತಿ ಪಾಟೀಲ ಸೇರಿದಂತೆ ಹಿರಿಯ ತಜ್ಞ ವೈದ್ಯರು, ಐಎಂಎ ಸದಸ್ಯರು ಉಪಸ್ಥಿತರಿದ್ದರು. ಐಎಂಎ ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಡಾ. ದೀಕ್ಷಾ ಪ್ರಾರ್ಥಿಸಿದರು. ಶತಮಾನೋತ್ಸವ ಸಮಿತಿಯ ಚೇರಮನ್ ಡಾ. ಎಸ್.ಆರ್. ನಾಗನೂರ ಸ್ವಾಗತಿಸಿದರು. ಖಜಾಂಚಿ ಡಾ. ಜಯರಾಜ ಪಾಟೀಲ ಧ್ವಜವಂದನೆ ಸಲ್ಲಿಸಿದರು. ಡಾ. ಸುನೀತಾ ಎಸ್. ಕುರಡಗಿ ಪರಿಚಯಿಸಿದರು. ಡಾ. ಜಿ.ಎಸ್. ಪಲ್ಲೇದ ಹಾಗೂ ಡಾ. ಸಲೀಂ ಜಮಾದಾರ ನಿರೂಪಿಸಿದರು. ಡಾ. ಪವನ ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?