ಕನ್ನಡಪ್ರಭ ವಾರ್ತೆ ಬೆಂಗಳೂರು
ಇದಕ್ಕೂ ಮುನ್ನ ಬೆಂಗಳೂರು ಟೌನ್ಹಾಲ್ ವತಿಯಿಂದ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ಬೆಳವಾಡಿ, ಕೆರೆಗಳ ಬಫರ್ ವಲಯವನ್ನು ಕೆರೆಯ ಗಾತ್ರದ ಆಧಾರದ ಮೇಲೆ ಹಾಲಿ 30 ಮೀಟರ್ನಿಂದ 3 ಮೀಟರ್ಗಳ ಇಳಿಸುವುದು ದುರಂತಕ್ಕೆ ಆಹ್ವಾನ ನೀಡಿದಂತೆ. ಬೆಂಗಳೂರಿನಲ್ಲಿ ನದಿಗಳಿಲ್ಲ. ನೀರಿಗೆ ಕೆರೆಗಳನ್ನು ಅವಲಂಬಿಸಲಾಗಿದೆ. ಆದರೆ, ಈಗಾಗಲೇ ಬಹುತೇಕ ಕೆರೆಗಳು ಒತ್ತುವರಿಯಾಗಿ ನಾಶವಾಗಿವೆ. ಬಫರ್ ವಲಯ ಕಡಿತಗೊಳಿಸಿದರೆ ಕೆರೆಗಳೆಲ್ಲ ನಾಶವಾಗಿ ಬೆಂಗಳೂರಿನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದರು.
ಗ್ರೇಟರ್ ಬೆಂಗಳೂರು ವಿಧೇಯಕ ಕೂಡ ಬೆಂಗಳೂರು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ. ಹಲವು ಲೋಪ ದೋಷಗಳಿವೆ. ಹೀಗಾಗಿ, ಇದನ್ನು ವಿರೋಧಿಸಿ ನಾವು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಜೆಪಿಯವರು ವಿಧೇಯಕಕ್ಕೆ ವಿರೋಧಿಸಿದ್ದರು. ಆದರೆ, ಅಧಿವೇಶನದ ವೇಳೆ ವಿಧೇಯಕ ಪಾಸ್ ಆಗುವುದನ್ನು ತಡೆಯಲಿಲ್ಲ ಎಂದು ಪ್ರಕಾಶ ಬೆಳವಾಡಿ ಅಸಮಾಧಾನ ವ್ಯಕ್ತಪಡಿಸಿದರು.ಬೆಂಗಳೂರು ಟೌನ್ಹಾಲ್ ಸಂಘಟನೆ ಸದಸ್ಯೆ ಕಾತ್ಯಾಯಿನಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಬೆಂಗಳೂರನ್ನು ಸಾಕಷ್ಟು ಹಾಳು ಮಾಡಲಾಗಿದೆ. ಇದರ ಜೊತೆಗೆ ಕೆರೆಗಳ ಬಫರ್ ವಲಯ ಕಡಿಮೆ ಮಾಡಿ ಇನ್ನಷ್ಟು ಹಾಳು ಮಾಡುತ್ತಿದ್ದಾರೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಆಗುವ ಸಾಧ್ಯತೆ ಇದೆ. ಇದು ಕಾನೂನಿಗೆ ವಿರುದ್ದವಾದ ವಿಧೇಯಕ ಎಂದರು.