ಕೋರ್ಟ್‌ ಆದೇಶ ಮೀರಿದ ಸಚಿವ ನಾಗೇಂದ್ರ ಕೈಬಿಡಿ- ದೆಹಲಿ ಭೇಟಿ ನ್ಯಾಯಾಂಗ ನಿಂದನೆ

Published : Aug 10, 2026, 06:30 AM IST
B Nagendra vsits Delhi in violation of court conditions hat happens if the ED finds evidence?

ಸಾರಾಂಶ

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಸರ್ಕಾರ ಪಡೆಯಬೇಕು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘಿಸಿದ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಸರ್ಕಾರ ಪಡೆಯಬೇಕು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ವಿಶೇಷ ಸಂಗತಿ ಹೊರ ಬಂದಿದೆ. ನಾವು ಹಿಂದೆ ನಾಗೇಂದ್ರ ವಿರುದ್ಧ ಹೋರಾಟ ಮಾಡಿದ್ದೆವು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಲೂಟಿ ಮಾಡಿ ಜೈಲಿಗೆ ಹೋಗಿಬಂದವರು. ರಾಜ್ಯವನ್ನು ಬಿಟ್ಟು ಹೋಗಬಾರದು ಅಂತ ನಾಗೇಂದ್ರ ಅವರಿಗೆ ನ್ಯಾಯಾಲಯ ನಿಬಂಧನೆ ಹಾಕಿದೆ.

ಪ್ರಕರಣ ಇನ್ನೂ ಬಾಕಿ ಇದೆ

ಆದರೂ ನಾಗೇಂದ್ರ ಅವರು ನ್ಯಾಯಾಲಯದ ಆದೇಶ ಧಿಕ್ಕರಿಸಿ ದೆಹಲಿಗೆ ಹೋಗಿ ಬಂದಿದ್ದಾರೆ. ಪ್ರಕರಣ ಇನ್ನೂ ಬಾಕಿ ಇದೆ. ಇದು ನ್ಯಾಯಾಂಗ ನಿಂದನೆ ಆಗಬಹುದು. ಇಲ್ಲದಿದ್ದರೆ ಅವರ ನ್ಯಾಯಾಂಗದ ನಿಂದನೆಗೆ ರಾಜ್ಯ ಸರ್ಕಾರ ಸಹ ಕಾರಣ ಆಗಲಿದೆ ಎಂದು ಹೇಳಿದರು.

ನಮ್ಮಲ್ಲಿ ಮಾತ್ರ

ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದೆಹಲಿಗೆ ತೆರಳಿರುವ ಬಗ್ಗೆ ಇ.ಡಿ. ಮಾಹಿತಿ ಕಲೆ ಹಾಕುತ್ತಿರುವ ಬಗ್ಗೆ ಕನ್ನಡಪ್ರಭ ಮಾತ್ರ ಆ.8ರ ಭಾನುವಾರ ವರದಿ ಮಾಡಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕುತೂಹಲ ಮೂಡಿಸಿದ ನಡೆ - ದಳ ಬಿಡದಿ ಪಾದಯಾತ್ರೆಯಿಂದ ದೂರವುಳಿದ ಬಿಜೆಪಿ ರಾಜ್ಯಾಧ್ಯಕ್ಷ
ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ: ಡಿ.ಕೆ.ಶಿವಕುಮಾರ್‌