ಪಟ್ಟಣದಲ್ಲಿ ನಡೆದ ಪ.ಜಾತಿ,ಪಂಗಡಗಳ ಹಿತರಕ್ಷಣಾ ಸಭೆ । ದಲಿತರಿಗೆ ಬ್ಯಾಂಕ್ ಸಾಲ ನಿರಾಕರಣೆ ಆರೋಪ
ಕ್ಷೇತ್ರ ಶಾಂತಿಯುತವಾಗಿರಬೇಕು:
ಗುಂಡ್ಲುಪೇಟೆ: ಕ್ಷೇತ್ರ ಶಾಂತಿಯುತವಾಗಿರಬೇಕು,ಸುಖಾ ಸುಮ್ಮನೆ ಕೇಸು ಹಾಕಲು ಬಿಡಲ್ಲ. ಕೇಸು ಬಂದರೆ ರಾಜಿ ಮಾಡಲು ಸೂಚನೆ ನೀಡಿದ್ದೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್.ಕೆ.ಶಿವರುದ್ರಪ್ಪ,ಕೆ.ಎಸ್. ನಾಗರತ್ನಮ್ಮ,ಎಚ್.ಎಸ್.ಮಹದೇವಪ್ರಸಾದ್,ಡಾ.ಗೀತಾ ಮಹದೇವಪ್ರಸಾದ್,ಸಿ.ಎಸ್.ನಿರಂಜನ್ ಕುಮಾರ್ ಹಾಗು ನಾನು ಸೇರಿದಂತೆ ಆರು ಜನರಿಗೆ ಅವಕಾಶ ಸಿಕ್ಕಿದೆ. ಕ್ಷೇತ್ರ ಶಾಂತಿಯುತವಾಗಿದೆ. ಮುಂದೆಯೂ ಶಾಂತಿಯುತವಾಗಿರಲಿದೆ ಎಂದರು.ಹಿರೀಕಾಟಿ ಸ್ಮಶಾನದ ಜಾಗದಲ್ಲಿ ಅಕ್ರಮ ಕ್ವಾರಿ:ಗುಂಡ್ಲುಪೇಟೆ: ಹಿರೀಕಾಟಿ ಕ್ವಾರಿಯ ಸ್ಮಶಾನದ ಜಾಗವನ್ನು ಬಿಡದೆ ಅಕ್ರಮವಾಗಿ ಕ್ವಾರಿ ಮಾಡುತ್ತಿದ್ದಾರೆ. ದಲಿತರು ಶವ ಹೂಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಶಾಸಕರು,ತಹಸೀಲ್ದಾರ್ ಗೆ ದೂರು ಸಲ್ಲಿಸಿದರು. ಸ್ಮಶಾನದಿಂದ ೨೦೦ ಮೀಟರ್ ದೂರ ಕೆಲಸ ಮಾಡಂಗಿಲ್ಲ ಎಂಬ ನಿಯಮವಿದೆ.ಕ್ವಾರಿಯಿಂದ ಗ್ರಾಮಸ್ಥರಿಗೆ ತೊಂದರೆಯಾದರೆ ಕ್ರಮ ಕೈಗೊಂಡು ಸ್ಥಳ ಪರಿಶೀಲನೆ ನಡೆಸಿ ಎಂದು ತಹಸೀಲ್ದಾರ್ಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು, ಎಸ್ಸಿ,ಎಸ್ಟಿ ಹಿತ ರಕ್ಷಣಾ ಸಮಿತಿ ಸದಸ್ಯರಾದ ಬೆಟ್ಟಹಳ್ಳಿ ಕೆಂಪರಾಜು,ಬಂಗಾರನಾಯಕ,ಡಿ.ಶ್ರೀನಿವಾಸ ಮೂರ್ತಿ,ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಬೇಗೂರು ಸರ್ಕಲ್ ಇನ್ಸ್ಪೆಕ್ಟರ್ ವಿ.ಸಿ.ವನರಾಜು ಇದ್ದರು.-----
ಬಾಕ್ಸ್...ಸಿಬಿಲ್ʼ ಪಾಠ ಮಾಡಿದ ಶಾಸಕ ಗಣೇಶ್ ಪ್ರಸಾದ್!ಗುಂಡ್ಲುಪೇಟೆ: ಗುಂಡ್ಲುಪೇಟೆ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತರಿಗೆ ಬ್ಯಾಂಕ್ ಗಳಲ್ಲಿ ಸಿಬಿಲ್ ನೆಪದಲ್ಲಿ ಸಾಲ ನೀಡುತ್ತಿಲ್ಲ ಎಂದು ದಲಿತ ಮುಖಂಡರು ದೂರಿದಾಗ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಿಬಿಲ್ ಸ್ಕೋರ್ ಬಗ್ಗೆ ಕೆಲ ಕಾಲ ಸಭಿಕರಿಗೆ ಪಾಠ ಮಾಡಿದರು.ಸಿಬಿಲ್ ಸ್ಕೋರ್ ಆಧಾರವಾಗಿಟ್ಟುಕೊಂಡೇ ಸಾಲ ನೀಡುವುದಾಗಿ ಆರ್ಬಿಐ ಬ್ಯಾಂಕಿನ ಆದೇಶವಿದೆ. ಆರ್ಬಿಐ ಸ್ವತಂತ್ರ ಸಂಸ್ಥೆಯಾಗಿದೆ. ಇದರಲ್ಲಿ ನಾನು,ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ ಹಾಗೂ ಬೇರೆಯವರ ಸಾಲಕ್ಕೆ ಗ್ಯಾರಂಟಿ ಹಾಕಿದ್ದರೂ ಸಿಬಿಲ್ ಸ್ಕೋರ್ ಬರುವುದಿಲ್ಲ. ಸಿಬಿಲ್ ಸ್ಕೋರ್ ಇಲ್ಲದಿದ್ರೆ ಬ್ಯಾಂಕ್ನವರು ಸರ್ಕಾರ ಹೇಳಿದರೂ ಸಾಲ ನೀಡಲ್ಲ. ಹಾಗಾಗಿ ಸಾಲ ಪಡೆದವರು ಮರು ಪಾವತಿ ಮಾಡಬೇಕು ಎಂದರು.
---- ೪ಜಿಪಿಟಿ೨ಗುಂಡ್ಲುಪೇಟೆಯಲ್ಲಿ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು.೪ಜಿಪಿಟಿ೩ಗುಂಡ್ಲುಪೇಟೆಯಲ್ಲಿ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು.-------------