ಕನ್ನಡಪ್ರಭ ವಾರ್ತೆ ಪಾಂಡವಪುರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ 85 ಶಿಕ್ಷಕರನ್ನು ಕೈ ಬಿಟ್ಟಿರುವ ಬಗ್ಗೆ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ವಿಜಯಕುಮಾರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಯುವರಾಜು ಇತರರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.
ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸಂಘ 85 ಶಿಕ್ಷಕರನ್ನು ಮತಪಟ್ಟಿಯಿಂದ ಕೈಬಿಟ್ಟಿದೆ ಹೊರತು ಇದರಲ್ಲಿ ಯಾವ ದುರುದ್ದೇಶವಿಲ್ಲ. ಜತೆಗೆ ತುರ್ತು ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮತಪಟ್ಟಿ ಏ.11ರಂದು ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು.ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಸಂಘದ ಅಭಿವೃದ್ಧಿ ಜತೆಗೆ ತಾಲೂಕಿನ ಶಿಕ್ಷಕರ ಹಿತ ಕಾಪಾಡಲು ಶ್ರಮಿಸಲಾಗಿದೆ. ಬಾಗಿಲು ಮುಚ್ಚಿದ ಶಿಕ್ಷಕರ ಭವನವನ್ನು ಪುನಶ್ಚೇತನಗೊಳಿಸಿ ಶಿಕ್ಷಕರ ಹಲವು ಕಾರ್ಯ ಚಟುವಟಿಕೆ ನಡೆಸಲಾಗಿದೆ. ಸಂಘದ ಅಭಿವೃದ್ಧಿ ಸಹಿಸದೆ ಇದೊಂದು ಅಕ್ರಮ ಚುನಾವಣೆ ಎಂದು ಆರೋಪಿಸಿರುವುದು ಸರಿಯಲ್ಲ ಎಂದರು.
ತಾಲೂಕಿನ ಶಿಕ್ಷಕರು ಎಲ್ಲವನ್ನು ಅರಿತಿದ್ದಾರೆ. ಜತೆಗೆ ಸಂಘಧ ಅಭಿವೃದ್ಧಿ ಕೆಲಸವನ್ನು ಕಣ್ಣಾರೆ ಕಂಡಿರುವ ಶಿಕ್ಷಕರು ಏ.19ರ ಚುನಾವಣೆಯಲ್ಲಿ ನಮ್ಮ ತಂಡವನ್ನು ಗೆಲ್ಲಿಸುವ ಮೂಲಕ ಗಡ್ಡ ಚಂದ್ರಶೇಖರ್ ತಂಡಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಚುನಾವಣಾ ಆಕಾಂಕ್ಷಿತರಾದ ಬಿ.ಎಂ.ನಾಗೇಗೌಡ, ಜೆ.ಶಿವಲಿಂಗಮ್ಮ, ಎಚ್.ಸಿ.ಧನಂಜಯ, ಎ.ಎಸ್.ಶಿವರಾಂ, ಎಸ್.ಎನ್.ಕೆಂಪೇಗೌಡ, ಟಿ.ಬಿ.ಪ್ರೇಮಕುಮಾರಿ, ಎಸ್.ರಾಘವೇಂದ್ರ, ಕೆ.ಆರ್.ಧರ್ಮೇಶ್, ಶಿಕ್ಷಕರಾದ ದೀಪು, ಕೆಂಚೇಗೌಡ ಸೇರಿದಂತೆ ಇತರರಿದ್ದರು.