;Resize=(412,232))
ಗದಗ : ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.
ಗಣರಾಜ್ಯೋತ್ಸವದ ಹಿನ್ನೆಲೆ 2 ದಿನ ರಜೆ ಬಳಿಕ ಮಂಗಳವಾರ ಕಾರ್ಯಾಚರಣೆ ಆರಂಭಿಸಿದಾಗ ಉತ್ಖನನಕ್ಕೆ ಗುರುತಿಸಿದ ಸ್ಥಳದಲ್ಲಿನ 4 ಬ್ಲಾಕ್ಗಳ ಪೈಕಿ ಎ-1 ಹಾಗೂ ಬಿ-1 ಗುಂಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದರಡಿಯಲ್ಲಿ 35 ಕಾರ್ಮಿಕರು ಆತಂಕದಿಂದ ಕೆಲಸ ಮಾಡುವಂತಾಗಿದೆ.
ಈವರೆಗೆ ಸುಮಾರು 7 ಅಡಿಗಳಷ್ಟು ಭೂಮಿ ಅಗೆದಿದ್ದು, ವೀರಭದ್ರೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿ (ಕಲ್ಯಾಣಿ) ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದೆ. ಇದೇ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನೀರು ಪೂರೈಸುವ ಪೈಪ್ಲೈನ್ ಗೋಚರಿಸಿದ್ದು, ಈ ಜಾಗವನ್ನು ಮೊದಲೇ ಅಗೆಯಲಾಗಿತ್ತು ಎನ್ನಲಾಗುತ್ತಿದೆ.