ರಾಮನಾಥಪುರ ಐದು ಪನ್ನೀರ್‌ಸೇಲ್ವಂಗಳ ಸ್ಪರ್ಧೆ

KannadaprabhaNewsNetwork |  
Published : Mar 30, 2024, 12:55 AM ISTUpdated : Mar 30, 2024, 01:35 PM IST
ಒ. ಪನ್ನೀರ್‌ಸೆಲ್ವಂ  | Kannada Prabha

ಸಾರಾಂಶ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ಡಿಎಂಕೆ, ಬಿಜೆಪಿ ಅಭ್ಯರ್ಥಿಗಳ ಜೊತೆಜೊತೆಗೇ ತಮ್ಮದೇ ಹೆಸರಿನ ಇತರೆ ನಾಲ್ವರ ಸವಾಲು ಕೂಡಾ ಎದುರಿಸಬೇಕಿದೆ. 

ಹೌದು. ರಾಮನಾಥಪುರಂನಲ್ಲಿ ಒ. ಪನ್ನೀರಸೆಲ್ವಂ ಜೊತೆ, ಓಚಪ್ಪನ್ ಪನ್ನೀರ್‌ಸೆಲ್ವಂ, ಒಯ್ಯ ತೇವರ್ ಪನ್ನೀರ್‌ಸೆಲ್ವಂ, ಓಚಾ ತೇವರ್ ಪನ್ನೀರ್‌ಸೆಲ್ವಂ ಮತ್ತು ಒಯ್ಯರಾಮ್ ಪನ್ನೀರ್‌ಸೆಲ್ವಂ ಹೆಸರಿನ ಅಭ್ಯರ್ಥಿಗಳು ಕೂಡಾ ಕಣಕ್ಕೆ ಇಳಿದಿದ್ದಾರೆ.

ಪನ್ನೀರಸೆಲ್ವಂ ಅವರನ್ನು ಸೋಲಿಸಲೆಂದೇ, ಈ ಹೆಸರಿನ ಬಗ್ಗೆ ಮತದಾರರಿಗೆ ಗೊಂದಲ ಉಂಟಾಗಲೆಂದೇ ಹೀಗೆ ಅವರದ್ದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು
ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ?