ಕನ್ನಡಪ್ರಭ ವಾರ್ತೆ ಮಂಡ್ಯ
ಟೌನ್ ಶಿಪ್ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಅದಕ್ಕೆ ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಟೌನ್ಶಿಪ್ ಮಾಡಲಿ. ಸರ್ಕಾರ ಟೌನ್ಶಿಪ್ಗೆ ಆಯ್ಕೆ ಮಾಡಿರುವುದು ಫಲವತ್ತಾದ ಕೃಷಿ ಭೂಮಿ ಇರುವ ಜಾಗ. ಅಲ್ಲಿ ಸಾವಿರಾರು ರೈತರು ಬೆಳೆ ಬೆಳೆದುಕೊಂಡು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಅವರನ್ನೇಕೆ ಬೀದಿಗೆ ತರುತ್ತೀರಿ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಖಾಸಗಿಯವರಿಗೆ ನೀಡುವುದು. ಇದಕ್ಕೆ ರಾಜ್ಯ ಸರ್ಕಾರ ಹುಡ್ಕೋದಿಂದ ೧೨ ಸಾವಿರ ಕೋಟಿ ರು. ಸಾಲ ಮಾಡಿದೆ. ಆ ಭೂಮಿಯನ್ನು ಡೆವೆಲಪ್ ಮಾಡಲು ಖಾಸಗಿ ಡೆವಲಪರ್ಗೆ ನೀಡುವುದು. ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಗುಜರಾತ್ನಲ್ಲಿ ಟೌನ್ಶಿಪ್ ಮಾಡಿಲ್ಲವೇ ಎಂಬ ಸಿಎಂ ಪ್ರಶ್ನೆಗೆ, ಮೋದಿ ಅವರು ಗುಜರಾತ್ನಲ್ಲಿ ಟೌನ್ಶಿಪ್ ಮಾಡಿರಬಹುದು. ಅದನ್ನು ಮಾಡುವುದಕ್ಕೆ ಮೋದಿ ಆಯ್ಕೆ ಮಾಡಿಕೊಂಡ ಜಾಗ ಯಾವುದು, ನೀವು ಆಯ್ಕೆ ಮಾಡಿಕೊಂಡಿರುವ ಜಾಗ ಯಾವುದು ಎನ್ನುವುದು ಪ್ರಶ್ನೆ ಎಂದರು.
೨೦೦೬ರಲ್ಲಿ ನಾನು ಐದು ಟೌನ್ಶಿಪ್ಗಳನ್ನು ಮಾಡಲು ಹೊರಟಾಗ ಇತ್ತೀಚಿನ ದಿನಗಳವರೆಗೂ ಕಾನೂನು ಮಂತ್ರಿ ಆಗಿದ್ದ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಿ ಐದೂ ಸ್ಥಳಗಳಲ್ಲಿ ಸತ್ಯಶೋಧನೆ ಮಾಡಿದ್ದರಲ್ಲಾ..?, ಆ ಸತ್ಯಶೋಧನಾ ವರದಿ ಎಲ್ಲಿ ಹೋಯಿತು?. ಅದನ್ನು ಜನರ ಮುಂದೆ ಇಡಿ. ಯಾವ ಉದ್ದೇಶಕ್ಕೆ ಅಂದು ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದರು ಎಂಬುದನ್ನು ಸಾರ್ವಜನಿಕವಾಗಿ ಜನರ ಮುಂದೆ ಹೇಳಲಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಅಂದು ನಾನು ಆ ವಿಷಯವಾಗಿ ಮೂರು ಬಾರಿ ಕೃಷ್ಣ ಕಚೇರಿಗೆ ಕರೆಸಿ ರೈತರೊಂದಿಗೆ ಮಾತನಾಡಿದ್ದೇನೆ. ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದೇನೆ. ಈಗ ಕಳೆದ ೨೦ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೃಷಿ ಭೂಮಿ ವಿಸ್ತರಣೆಯಾಗಿದೆ, ನೀರಾವರಿ ಸೌಲಭ್ಯ ಬಂದಿದೆ. ಈ ಹಂತದಲ್ಲಿ ರೈತರ ವಿರೋಧದ ನಡುವೆಯೂ ತರಾತುರಿಯಲ್ಲಿ ಟೌನ್ಶಿಪ್ ಮಾಡಲು ಹೊರಟಿದ್ದೀರಿ. ಇದರಿಂದ ನೀವು ಮಾಡುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದರು.
ರೈತರನ್ನು ಬೀದಿಗೆ ತಳ್ಳಿ ಮಾಡುವ ಸಾಧನೆ ಏನು?:
ಅನಾಹುತದ ಬಗ್ಗೆ ಯೋಚಿಸಲಿಲ್ಲ:
ಎರಡು ತಿಂಗಳ ಗೃಹಲಕ್ಷ್ಮೀ ಹಣವನ್ನು ನೀಡದಿರುವ ಬಗ್ಗೆ ಸರ್ಕಾರ ಜಾಣಮೌನ ತಳೆದಿದೆ. ಈ ಬಗ್ಗೆ ಮಾತನಾಡುತ್ತಲೇ ಇಲ್ಲ ೫೦೦೦ ಕೋಟಿ ರು. ಹಣ ಏನಾಯಿತು, ಎಲ್ಲಿಗೆ ಹೋಯಿತು ಎಂಬುದಕ್ಕೆ ಯಾರೂ ಉತ್ತರ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.