ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಹೊರವಲಯದ ಯಲುವಹಳ್ಳಿ ಗ್ರಾಮದ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಎನ್. ರಮೇಶ್ರ ಗೃಹದಲ್ಲಿ ಮಾಜಿ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ವಿರಚಿತ ವಿಶ್ವ ಸಂಸ್ಕೃತಿಯ ಮಹಾಯಾನ ಗದ್ಯಕಾವ್ಯದ ಬಿಡುಗಡೆ ಸಮಾರಂಭದ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಚುಂಚಶ್ರೀಗಳಿಂದ ಪುಸ್ತಕ ಬಿಡುಗಡೆಮಾರ್ಚ್ 2 ರಂದು ನಗರ ಹೊರವಲಯದ ಎಸ್ಜೆಸಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತಿ ಮಹಾಯಾನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗ್ರಂಥವನ್ನು ಬಿಡುಗಡೆ ಮಾಡುವರು. ಈ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು ಉಪಸ್ಥಿತಿ ಇರುವವರು ಎಂದು ತಿಳಿಸಿದರು.
ಹರಿಯಾಣ ಮತ್ತು ಪಂಜಾಬ್ ನಿಂದ ಸಾವಿರ ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಧಾನಿಗೆ ಆಗಮಿಸಿದ್ದಾರೆ ಅವರನ್ನು ದಮನ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ರೈತರಿಗೆ ಎನ್ ಡಿಎ ಸರ್ಕಾರ ಕೊಟ್ಟಿರುವ ಬಳುವಳಿ ಆಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಡಿವಿಆರ್ ರಾಜೇಶ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಪಕ್ಷದ ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ, ಹನುಮಂತಪ್ಪ, ಎಂ.ವಿ. ಕೃಷ್ಣಪ್ಪ, ಯಲುವಹಳ್ಳಿ ಆರ್. ಜನಾರ್ಧನ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಆವುಲರೆಡ್ಡಿ, ಕೆ.ವಿ.ಚಂದ್ರಣ್ಣ, ಮಾಜಿ ನಗರಸಭಾ ಸದಸ್ಯ ಲಕ್ಷ್ಮಣ್ ಮತ್ತಿತರರಿದ್ದರು.