ಎಟಾವಾ (ಉ.ಪ್ರ.): ‘ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ.
ನಾನು ಮತ್ತೆ ಪ್ರಧಾನಿ ಎಂದಿದ್ದರು ಮುಲಾಯಂ:
‘ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ಸಮಾಜವಾದಿ ಪಾರ್ಟಿ ನೇತಾರ ಮುಲಾಯಂ ಸಿಂಗ್ ಯಾದವ್ 2019ರಲ್ಲೇ ತಿಳಿಸಿದ್ದರು’ ಎಂದೂ ಮೋದಿ ಮೆಲುಕು ಹಾಕಿದರು. ‘ಅವರ ಈ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ಅದೇ ನನಗೆ ಶ್ರೀರಕ್ಷೆ’ ಎಂದೂ ಮೋದಿ ಹೇಳಿದ್ದು, ತಾವು 3ನೇ ಬಾರಿ ಪ್ರಧಾನಿ ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ತಮ್ಮ ವಿರುದ್ಧ ತೊಡೆ ತಟ್ಟಿರುವ ಅವರ ಪುತ್ರ ಅಖಿಲೇಶ್ ಯಾದವ್ಗೆ ಟಾಂಗ್ ನೀಡಿದರು.ಮುಸ್ಲಿಮರು ಕೇವಲ ದಾಳ:
ಬಳಿಕ ಸೀತಾಪುರದಲ್ಲಿ ನಡೆದ ಮತ್ತೊಂದು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಮುಸ್ಲಿಮರನ್ನು ಕಾಂಗ್ರೆಸ್ ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದೆ. ಇದು ಆ ಸಮುದಾಯಕ್ಕೆ ಈಗ ಅರ್ಥವಾಗಿದೆ ಎಂದೂ ಮೋದಿ ನುಡಿದರು.