ಪತ್ರಿಕಾ ವಿತರಕರಿಗೆ ಪರಿಹಾರ ಒದಗಿಸಲು ಆಗ್ರಹ: ಬಸವೇಶ್ವರನಗರ ಸಂಘದ ಉದ್ಘಾಟನೆ

KannadaprabhaNewsNetwork |  
Published : Dec 02, 2025, 04:00 AM IST
Rajyotsava | Kannada Prabha

ಸಾರಾಂಶ

ರಾಜ್ಯದ ಎಲ್ಲೇ ಪತ್ರಿಕಾ ವಿತರಕರು ಮೃತಪಟ್ಟರೂ ಅವರಿಗೆ ಸರ್ಕಾರ ₹ 5ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ ಒತ್ತಾಯಿಸಿದರು.

 ಬೆಂಗಳೂರು :  ರಾಜ್ಯದ ಎಲ್ಲೇ ಪತ್ರಿಕಾ ವಿತರಕರು ಮೃತಪಟ್ಟರೂ ಅವರಿಗೆ ಸರ್ಕಾರ ₹ 5ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಬಸವೇಶ್ವರನಗರ ದಿನಪತ್ರಿಕೆ ವಿತರಕರ ಪತ್ರಿಕಾ ವಿತರಕರ ಸಂಘದಿಂದ ನಡೆದ ಬಸವೇಶ್ವರನಗರ ಸಂಘದ ಉದ್ಘಾಟನೆ, ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ಪತ್ರಿಕಾ ವಿತರಕರಿಗೆ ನೀಡಲಾಗಿಲ್ಲ

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪತ್ರಿಕಾ ವಿತರಕರಿಗೆ ನೀಡಲಾಗಿಲ್ಲ. 70 ವರ್ಷ ಮೇಲ್ಪಟ್ಟ ವಿತರಕರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಬೇಡಿಕೆ ಇಟ್ಟರೂ ಈಡೇರುತ್ತಿಲ್ಲ. ಯುವಕರು ಪತ್ರಿಕೆಗಳನ್ನು ಕೊಂಡು ಓದಬೇಕು ಎಂದು ಹೇಳಿದರು.

ಮಾಜಿ ಉಪಮೇಯರ್‌ ಆರ್. ಹರೀಶ್, ಪತ್ರಿಕಾ ವಿತರಕರ ಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

 ಪತ್ರಿಕಾ ವಿತರಕರಿಗೆ ವಸತಿ ಯೋಜನೆ ಹಾಗೂ ಆರೋಗ್ಯ ಕ್ಷೇಮನಿಧಿಗಾಗಿ ಸಲಹೆ

ಐಎಫ್‌ಡಬ್ಲೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಿಕಾ ವಿತರಕರಿಗೆ ವಸತಿ ಯೋಜನೆ ಹಾಗೂ ಆರೋಗ್ಯ ಕ್ಷೇಮನಿಧಿಗಾಗಿ ಪ್ರತಿ ತಿಂಗಳು ಹಣ ಕ್ರೂಢೀಕರಿಸಿ ಎಂದು ಸಲಹೆ ನೀಡಿದರು.

ತುಮಕೂರಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಗರಾಜ್ ಮತ್ತು ಶಿರಾ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾದೂರು ವಾಸುದೇವ ಅವರನ್ನು ಸನ್ಮಾನಿಸಲಾಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂಗಮ ಸುರೇಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಎನ್., ಸುರೇಶ್ ಸೇರಿ ಹಲವರಿದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಚಿರತೆ ದಾಳಿಯ ವೇಳೆ ಸ್ನೇಹಿತರ ಕರೆ : ನರಳಾಡಿದವ ಶವವಾಗಿ ಪತ್ತೆ!