ತೆಲಂಗಾಣದ ಚುನಾವಣೆಯ ಪ್ರಚಾರ ಮತ್ತು ಯೋಜನಾ ಸಮಿತಿಯ ಮುಖ್ಯ ಸಮನ್ವಾಯಾಧಿಕಾರಿಯಾಗಿ ನಟಿ ಹಾಗೂ ರಾಜಕಾರಣಿ ವಿಯಜಶಾಂತಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ನೇಮಿಸಿದ್ದಾರೆ.
ನವದೆಹಲಿ: ತೆಲಂಗಾಣದ ಚುನಾವಣೆಯ ಪ್ರಚಾರ ಮತ್ತು ಯೋಜನಾ ಸಮಿತಿಯ ಮುಖ್ಯ ಸಮನ್ವಾಯಾಧಿಕಾರಿಯಾಗಿ ನಟಿ ಹಾಗೂ ರಾಜಕಾರಣಿ ವಿಯಜಶಾಂತಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ನೇಮಿಸಿದ್ದಾರೆ.
ನಟಿ ಕಾಂಗ್ರೆಸ್ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ‘ತಕ್ಷಣಕ್ಕೆ ಜಾರಿಗೆ ಬರುವಂತೆ ತೆಲಂಗಾಣ ವಿಧಾನಸಭೆಗೆ ಮುಖ್ಯ ಯೋಜನಾ ಸಮನ್ವಯಾಧಿಕಾರಿಯಾಗಿ ವಿಜಯಶಾಂತಿ ಅವರ ನೇಮಕ ಪ್ರಸ್ತಾವಕ್ಕೆ ಖರ್ಗೆ ಅವರು ಅನುಮೋದನೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅಧಿಕೃತ ಹೇಳಿಕೆ ನೀಡಿದ್ದಾರೆ.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.