‘ತ.ನಾಡಿಗೆ 6000 ಕ್ಯು. ನೀರು ಬಿಡ್ತೀವಿ, 15000 ಕ್ಯು. ಬಿಡಲ್ಲ’

Published : Aug 20, 2026, 11:44 AM IST
Cauvery

ಸಾರಾಂಶ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಆ.24 ರಂದು ಕಾವೇರಿ ನೀರು ನಿಯಂತ್ರಣ ಸಮಿತಿ( ಸಿಡಬ್ಲ್ಯುಆರ್‌ಸಿ) ಸಭೆ ಹಾಗೂ ಆ.25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಸಭೆ ನಿಗದಿಯಾಗಿದೆ.

ನವದೆಹಲಿ: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಆ.24 ರಂದು ಕಾವೇರಿ ನೀರು ನಿಯಂತ್ರಣ ಸಮಿತಿ( ಸಿಡಬ್ಲ್ಯುಆರ್‌ಸಿ) ಸಭೆ ಹಾಗೂ ಆ.25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಸಭೆ ನಿಗದಿಯಾಗಿದೆ.

ರಾಜ್ಯ ಸರ್ಕಾರ ಅರ್ಜಿ

ಈ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದ್ದು, ಕೃಷ್ಣರಾಜ ಸಾಗರ ಜಲಾಶಯದಲ್ಲಿ ಹಲವು ದಿನಗಳಿಂದ ನೀರಿನ ಒಳಹರಿವು ಪ್ರಮಾಣ ಶೇ.50ರಷ್ಟಿದೆ.

15 ಸಾವಿರ ಕ್ಯುಸೆಕ್‌ ಕಾವೇರಿ ನೀರನ್ನು ಬಿಡಲು ಆಗುವುದಿಲ್ಲ

ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನಿತ್ಯ 15 ಸಾವಿರ ಕ್ಯುಸೆಕ್‌ ಕಾವೇರಿ ನೀರನ್ನು ಬಿಡಲು ಆಗುವುದಿಲ್ಲ. ಬರೀ 6 ಸಾವಿರ ಕ್ಯುಸೆಕ್ ನೀರು ಹರಿಸುತ್ತೇವೆ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ತಿಳಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಆನ್‌ಲೈನ್‌ ಕೋಚಿಂಗ್‌: ಮೋದಿ ಭರವಸೆ ಬೆನ್ನಲ್ಲೇ ಜೋಶಿ ಕಣಕ್ಕೆ
ಕೇಂದ್ರದಿಂದ ಜೆನ್‌ಝೀ ಓಲೈಕೆ : ನಿತ್ಯ ಒಂದು ವಿವಿಗೆ ಒಬ್ಬ ಕೇಂದ್ರ ಸಚಿವ!