ಕನ್ನಡಪ್ರಭ ವಾರ್ತೆ ಬೀದರ್
ನಗರದ ನೌಬಾದ್ನ ಜ್ಞಾನಶಿವಯೋಗಾಶ್ರಮದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪರಸ್ಪರರ ಬೆಳವಣಿಗೆಗೆ ಸಹಕರಿಸಬೇಕು. ಸಾಧನೆಯತ್ತ ಹೆಜ್ಜೆ ಇಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಅಕ್ಕ ಮಹಾದೇವಿ ಸ್ತ್ರೀಯರ ಆಧ್ಯಾತ್ಮ ಸ್ವಾತಂತ್ರ್ಯದ ರೂವಾರಿಯಾಗಿದ್ದಾರೆ. ಮಾತೆ ಕರುಣಾದೇವಿ ಅವರ ಪ್ರತಿರೂಪ ವಾಗಿದ್ದು, ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.ಅಕ್ಕಪಡೆಯು ರಾಜ್ಯದಲ್ಲಿ ಅಕ್ಕ ಮಹಾದೇವಿ ಅವರ ಕನಸು ಸಾಕಾರಗೊಳಿಸುವ ಹಾಗೂ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮಾತೆ ಕರುಣಾದೇವಿ ಅವರು ನಿರಂತರ ಸಮಾಜೋಧಾರ್ಮಿಕ ಕಾರ್ಯ ಗಳಲ್ಲಿ ನಿರತರಾಗಿದ್ದಾರೆ. ಅವರು ಬೀದರ್ ಜಿಲ್ಲೆಯವರೇ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯಸ್ವಾಮಿ, ಮೇರಾ ಯುವ ಭಾರತ್ನದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಆಮ್ ಆದ್ಮಿ ಪಕ್ಷದ ಜಿಲಾಧ್ಯಕ್ಷ ಸಿದ್ದಪ್ಪ ಫುಲಾರಿ, ಪ್ರಮುಖ ರಾದ ವರದಯ್ಯ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ಮಹೇಶ ಪಾಟೀಲ, ಕಂಟೆಪ್ಪ ಭಂಗೂರೆ, ಕುಶಾಲರಾವ್ ಗೌರಶೆಟ್ಟಿ, ಡಾ. ಸುಭಾಷ್ ಪಾಟೀಲ, ಡಾ. ಓಂಕಾರ ಸ್ವಾಮಿ, ಶಿವಕುಮಾರ ಕೊಳಾರ, ಗಂಗಾಧರ ಸ್ವಾಮಿ, ಜಗದೀಶ್ವರ್ ಬಿರಾದಾರ, ಶಿವಶಂಕರ ಬೆಳಮಗಿ, ಅಮರೇಶ ಕಮಠಾಣೆ, ಶ್ರೀಕಾಂತ ಹೊನ್ನಿಕೇರಿ, ಶಾಂತಮ್ಮ ಸ್ವಾಮಿ, ಮಹಾಂತೇಶ್ ಬಿರಾದಾರ ಮತ್ತಿತರರು ಇದ್ದರು.