ಚುನಾವಣಾ ಆಯೋಗದ ಆದೇಶ ಪಾಲಿಸಲ್ಲ: ಉದ್ಧವ್ ಸವಾಲು

KannadaprabhaNewsNetwork |  
Published : Apr 22, 2024, 02:04 AM ISTUpdated : Apr 22, 2024, 04:24 AM IST
ಉದ್ಧವ್‌ ಠಾಕ್ರೆ | Kannada Prabha

ಸಾರಾಂಶ

ಹಾಕಬೇಕು ಎಂಬ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಉದ್ಧವ್‌ ಠಾಕ್ರೆ ಸಡ್ಡು ಹೊಡೆದಿದ್ದಾರೆ.

ಮುಂಬೈ: ತಮ್ಮ ಪಕ್ಷ ಹೊರತಂದಿರುವ ನೂತನ ಧ್ಯೇಯಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಎಂಬ ಪದಗಳನ್ನು ತೆಗೆದು ಹಾಕಬೇಕು ಎಂಬ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಶಿವಸೇನೆ (ಉದ್ಧವ್‌ ಬಣ) ನಾಯಕ ಉದ್ಧವ್‌ ಠಾಕ್ರೆ ಸಡ್ಡು ಹೊಡೆದಿದ್ದಾರೆ.

‘ತುಳಜಾ ಭವಾನಿ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು, ಹಿಂದವೀ ಸಮಾಜ ಸ್ಥಾಪಿಸಿದ್ದರು. ಹೀಗಿರುವಾಗ ಹಿಂದೂ ಮತ್ತು ಜೈ ಭವಾನಿ ಎಂಬ ಪದ ತೆಗೆಯುವಂತೆ ನೀಡಿದ ನೋಟಿಸ್‌ ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ. ನಾವೇನು ಹಿಂದೂ ಧರ್ಮ ಅಥವಾ ದೇವರ ಹೆಸರಲ್ಲಿ ಮತ ಕೇಳುತ್ತಿಲ್ಲ. ಹೀಗಾಗಿ ಧ್ಯೇಯ ಗೀತೆಯಿಂದ ಆ ಎರಡೂ ಪದಗಳನ್ನು ತೆಗೆಯುವುದಿಲ್ಲ’ ಎಂದಿದ್ದಾರೆ.

‘ಒಂದು ವೇಳೆ ನಮ್ಮ ನಿರ್ಧಾರದ ವಿರುದ್ಧ ಆಯೋಗ ಕ್ರಮ ಕೈಗೊಂಡಿದ್ದೇ ಆದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಜೈ ಬಜರಂಗ ಬಲಿ ಎಂದು ಇವಿಎಂ ಬಟನ್‌ ಒತ್ತಿ ಎಂದು ಹೇಳಿದ್ದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!