- ಡಾ. ಗಿರೀಶ್ ಬಿ. ನವಸುಂದ, ಸೀನಿಯರ್ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್, ಲೀಡ್ ಕನ್ಸಲ್ಟೆಂಟ್ - ಸ್ಟ್ರಕ್ಚರಲ್ ಹಾರ್ಟ್ ಡಿಸೀಸ್ ಮತ್ತು ಹಾರ್ಟ್ ಫೇಲ್ಯೂರ್, ಅಪೋಲೋ ಹಾಸ್ಪಿಟಲ್ಸ್ ಬನ್ನೇರುಘಟ್ಟ, ಬೆಂಗಳೂರು.ಹೃದಯದ ಕವಾಟದ ಸಮಸ್ಯೆಗಳು ಗಂಭೀರವಾಗುವವರೆಗೆ ಅವು ಹಲವು ಬಾರಿ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಲಕ್ಷಾಂತರ ಜನರು ಬಾಲ್ಯದ ಸೋಂಕುಗಳಿಂದ ಅಥವಾ ವಯಸ್ಸಾದ ಕಾರಣದಿಂದ ಹಾನಿಗೊಳಗಾದ ಕವಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಈ ಹೆಚ್ಚಿನ ಹಾನಿಗಳನ್ನು ತಡೆಗಟ್ಟಬಹುದು. ಹಾಗಾಗಿ ಈ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ:
ಹೃದಯದ ಕವಾಟದ ಸಮಸ್ಯೆಗಳು ಇದ್ದಕ್ಕಿದ್ದಂತೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುವುದಿಲ್ಲ. ವಿವರಿಸಲಾಗದ ಆಯಾಸ, ದೈನಂದಿನ ಚಟುವಟಿಕೆಗಳ ಸಮಯದಲ್ಲಿ ಉಸಿರಾಟದ ತೊಂದರೆ, ಕಾಲು ಅಥವಾ ಪಾದಗಳಲ್ಲಿ ಬಾವು, ತಲೆಸುತ್ತು ಅಥವಾ ಎದೆಯಲ್ಲಿ ಢವಢವ ಎನಿಸುವ ಆತಂಕಗಳ ಬಗ್ಗೆ ಎಚ್ಚರವಿರಲಿ. ಈ ಲಕ್ಷಣಗಳನ್ನು ಸಾಮಾನ್ಯವಾಗಿ ಒತ್ತಡ ಅಥವಾ ವಯಸ್ಸಾದ ಕಾರಣ ಎಂದು ನಿರ್ಲಕ್ಷಿಸಲಾಗುತ್ತದೆ; ಆದರೆ ಹಾಗೆ ಮಾಡಬಾರದು.
2. ಪ್ರತಿ ವರ್ಷ ಹೃದಯದ ತಪಾಸಣೆ ಮಾಡಿಸಿಕೊಳ್ಳಿವಾರ್ಷಿಕವಾಗಿ ಮಾಡಿಸಿಕೊಳ್ಳುವ ಸಾಮಾನ್ಯ ಆರೋಗ್ಯ ತಪಾಸಣೆ, ಅದರಲ್ಲೂ ಸ್ಟೆತೊಸ್ಕೋಪ್ ಪರೀಕ್ಷೆಯು ಹೃದಯದ ಅಸಹಜ ಶಬ್ದಗಳನ್ನು ಅವು ಗಂಭೀರವಾಗುವ ಮೊದಲೇ ಪತ್ತೆಹಚ್ಚಬಲ್ಲದು. ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿದ್ದರೆ, ಪ್ರತಿ ವರ್ಷ ವೈದ್ಯರನ್ನು ಭೇಟಿ ಮಾಡುವುದು ಕೇವಲ ಆಯ್ಕೆಯಲ್ಲ, ಅದು ಅತ್ಯಗತ್ಯ.3. ಅಸಹಜ ಭಾವ ಆವರಿಸಿದರೆ ಎಕೋಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಿಸಿ
ವಿವಿಧ ವಯೋಮಾನದವರಿಗೆ ಬೇರೆ ಬೇರೆ ರೀತಿಯ ಅಪಾಯಗಳಿರುತ್ತವೆ. 18-40 ವರ್ಷದವರು ಗಂಟಲು ಸೋಂಕನ್ನು ತಕ್ಷಣವೇ ಗುಣಪಡಿಸಿಕೊಳ್ಳಬೇಕು. 40-60 ವರ್ಷದವರು ಆಯಾಸ ಮತ್ತು ಉಸಿರಾಟದ ಬದಲಾವಣೆಗಳ ಬಗ್ಗೆ ಗಮನ ಹರಿಸಬೇಕು. 60 ವರ್ಷ ಮೇಲ್ಪಟ್ಟವರು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾದ ‘ಅಯೋರ್ಟಿಕ್ ಸ್ಟೆನೋಸಿಸ್’ ಪತ್ತೆಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು.5. ಸುಸ್ತನ್ನು ಕೇವಲ ಒತ್ತಡ ಅಥವಾ ವಯಸ್ಸಿನ ಕಾರಣ ಎಂದು ತಳ್ಳಿಹಾಕಬೇಡಿ
ನಿರಂತರ ಅಧಿಕ ರಕ್ತದೊತ್ತಡವು ಹೃದಯವು ಪ್ರತಿ ಬಡಿತಕ್ಕೂ ಹೆಚ್ಚು ಶ್ರಮವಹಿಸುವಂತೆ ಮಾಡುತ್ತದೆ, ಇದು ಕಾಲಾನಂತರದಲ್ಲಿ ಕವಾಟಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತದೆ. ಇದು ಕವಾಟಗಳು ಸವೆಯಲು ಅಥವಾ ಗಟ್ಟಿಯಾಗಲು ಕಾರಣವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕವಾಟದ ಆರೋಗ್ಯವನ್ನು ರಕ್ಷಿಸಲು ಇರುವ ಸರಳ ಮಾರ್ಗವಾಗಿದೆ.7. ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ
ಹೃದಯದ ಕವಾಟದ ಕಾಯಿಲೆಯ ರೋಗನಿರ್ಣಯವಾದರೆ ಭಯಪಡಬೇಕಿಲ್ಲ. ಕವಾಟದ ರಿಪೇರಿ ಅಥವಾ ಬದಲಾವಣೆ ಚಿಕಿತ್ಸೆಗಳು ಈಗ ತುಂಬಾ ಸುಧಾರಿಸಿವೆ. ವಯಸ್ಸಾದವರಿಗೆ ಅಥವಾ ಹೆಚ್ಚಿನ ಅಪಾಯವಿರುವ ರೋಗಿಗಳಿಗೆ ಟಿಎವಿಆರ್ ನಂತಹ ತಂತ್ರಜ್ಞಾನದ ಮೂಲಕ ಓಪನ್-ಹಾರ್ಟ್ ಸರ್ಜರಿ ಇಲ್ಲದೆಯೇ ಸಣ್ಣ ಕೊಳವೆಯ ಸಹಾಯದಿಂದ ಕವಾಟವನ್ನು ಬದಲಾಯಿಸಬಹುದು. ಈಗ ಭಾರತೀಯ ನಿರ್ಮಿತ ಕವಾಟಗಳು ಲಭ್ಯವಿದ್ದು, ಈ ಚಿಕಿತ್ಸೆಯು ಸಾಮಾನ್ಯರಿಗೂ ಕೈಗೆಟುಕುವಂತಾಗಿದೆ.9. ಉಚಿತ ತಪಾಸಣಾ ಶಿಬಿರಗಳ ಪ್ರಯೋಜನ ಪಡೆಯಿರಿ