ನಿವೃತ್ತಿ ಎಂದಕೂಡಲೇ ನೆನಪಾಗುವುದು ಮುಸ್ಸಂಜೆಯ ನೆಮ್ಮದಿಯ ಬದುಕು ಮತ್ತು ಯಾವುದೇ ಆಫೀಸ್ ಕಿರಿಕಿರಿಯಿಲ್ಲದ ವಿಶ್ರಾಂತ ಜೀವನ. ಆದರೆ, ಈ ನಿರಾಳ ಬದುಕಿಗೆ ಅಡ್ಡಿಯಾಗುವ ವಿಲನ್ ಯಾರೆಂದು ಗೊತ್ತೇ? ಖರ್ಚುಗಳು ನಿಲ್ಲುವುದಿಲ್ಲ, ಆದರೆ ಬರುವ ಸಂಬಳ ನಿಂತುಹೋಗುತ್ತದೆ ಎನ್ನುವ ಸತ್ಯ.
ಪ್ರಕೃತಿಯ ವಿಚಿತ್ರಗಳಲ್ಲಿ ಇದು ಒಂದು ಇದು ಹಿಪ್ಪು ನೇರಳೆ ಹಣ್ಣಿನಂತೆ ಕಂಡರೂ ಇದು ಗಿಡವಲ್ಲ ಬಳ್ಳಿ ಮುಳ್ಳು ಬೇರೆ ಇದೆ ಜರ್ಮನಿಯಲ್ಲಿ ಎಲ್ಲಾ ಕಡೆ ಬೇಲಿಯಲ್ಲಿ ಬೆಳೆಯ ಒಂದು ತರಹದ ಮುಳ್ಳಿನ ಹಣ್ಣು ನೋಡಲು ಎಷ್ಟು ವಿಶೇಷವಾಗಿದೆಯೋ ತಿನ್ನಲು ಕೂಡ ಅಷ್ಟೇ ವಿಭಿನ್ನ ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಇರುವ ಇದರ ರುಚಿ ಕಾಡಿನ ನೈಸರ್ಗಿಕ ಸೊಗಡನ್ನು ನೆನಪಿಸುತ್ತದೆ
ನಾರಿಯ ಗೌರವ ಮತ್ತು ಸುರಕ್ಷತೆ ಸಮಾಜದ ಜವಾಬ್ದಾರಿಯೆಂಬ ಸಂದೇಶ ನಮ್ಮ ಪರಂಪರೆಯಲ್ಲಿದೆ. ಹೀಗಾಗಿ ರಕ್ಷಾಬಂಧನದ ಅರ್ಥವನ್ನು ಕೇವಲ ‘ಅಣ್ಣನು ತಂಗಿಯನ್ನು ರಕ್ಷಿಸಬೇಕು’ ಎಂಬ ಸೀಮಿತ ಅರ್ಥದಲ್ಲಿ ನೋಡುವುದಕ್ಕಿಂತ, ‘ಪರಸ್ಪರರು ಪರಸ್ಪರರ ಸುಖ-ದುಃಖಗಳಲ್ಲಿ ಬೆಂಬಲವಾಗಿ ನಿಲ್ಲಬೇಕು’ ಎಂಬ ವಿಶಾಲ ಅರ್ಥದಲ್ಲಿ ಗ್ರಹಿಸುವುದು ಸೂಕ್ತ.
ಭಾರತದಲ್ಲಿ ಇತ್ತೀಚಿನ ಆಹಾರ ಬೆಲೆಗಳ ಏರಿಕೆಯನ್ನು ಸಮಗ್ರ ಆಹಾರ ದರ ಏರಿಕೆಯೆಂದು ಮಾತ್ರ ನೋಡುವುದು ಸೂಕ್ತವಲ್ಲ. ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳೂ ಏರಿಕೆಯಾಗಿಲ್ಲ. ತೊಗರಿಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಅರಿಶಿನದ ಬೆಲೆಗಳು 2024ರ ಮಟ್ಟದಿಂದ ಗಣನೀಯವಾಗಿ ಇಳಿಕೆಯಾಗಿವೆ.
1983ರ ಕರ್ನಾಟಕ ವಿಧಾನಸಭೆ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ಒಂದು ನಿರ್ಣಾಯಕ ಘಟ್ಟ. ಜನತಾ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ದೇಶದ 2ನೇ ಮತ್ತು 3ನೇ ಹಂತದ ಪಟ್ಟಣಗಳ ಸಣ್ಣ ಉದ್ದಿಮೆಗಳು ಇಂದು ಡಿಜಿಟಲ್ ತಂತ್ರಜ್ಞಾನದ ಬಲದಿಂದ ರಾಷ್ಟ್ರಮಟ್ಟದ ಬ್ರ್ಯಾಂಡ್ಗಳಾಗಿ ರೂಪಾಂತರಗೊಳ್ಳುತ್ತಿವೆ. ಅಮೆಜಾನ್ ಇಂಡಿಯಾದಲ್ಲಿ 17 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರ ಪೈಕಿ ಶೇ. 70ಕ್ಕೂ ಹೆಚ್ಚು ಮಂದಿ ಸಣ್ಣ ನಗರಗಳಿಂದಲೇ ಬಂದಿರುವುದು ವಿಶೇಷ.
ಟೀನೇಜ್ ಹುಡುಗರು ಇದೀಗ ನೇರ ಹೂಡಿಕೆಗೇ ಇಳಿದುಬಿಟ್ಟಿದ್ದಾರೆ. ಇವರು ವಯಸ್ಕರಾದಾಗ ಇನ್ವೆಸ್ಟ್ಮೆಂಟ್ ಮಾಸ್ಟರ್ಗಳಾಗಬಹುದು. ಟೀನ್ಗಳ ಕೆಲವು ಹಣಕಾಸು ನಿರ್ವಹಣೆಯ ಸೂತ್ರಗಳು ಇಲ್ಲಿವೆ.
ಬುಕ್ ಬ್ರಹ್ಮ ಸಂಸ್ಥೆ ಕಾದಂಬರಿಯ ಹಸ್ತಪ್ರತಿಗೆ ನೀಡುವ ಪ್ರತಿಷ್ಠಿತ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ ಈ ಸಲ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮಹೇಶ್ ಅರಬಳ್ಳಿ ಅವರ ಚೊಚ್ಛಲ ಕಾದಂಬರಿ ‘ನೀರವ’ ಕೃತಿಗೆ ಸಂದಿದೆ
ಕಾನೂನುಬದ್ದ ವಿಚ್ಛೇದನ ಪಡೆದ ಹಾಗೂ ಕಾದಂಬಿನಿ ಗಂಗೂಲಿ ಮತ್ತು ಆನಂದಿಬಾಯಿ ಜೋಷಿರವರೊಂದಿಗೆ ದೇಶದಲ್ಲಿ ಮೊದಲು ಪ್ರಾಕ್ಟೀಸ್ ಮಾಡಿದ ವೈದ್ಯೆಯಾಗಿ ಕಟ್ಟಿಬಿಗಿದ ವ್ಯಸಸ್ಥೆಯಲ್ಲಿ ಹೀಗೂ ಬದುಕಿನ ಸಾಧ್ಯತೆಯ ತೋರಿದ ರುಕ್ಮಾಬಾಯಿ ರಾವತ್ ಅವರ ಜೀವಿತಗಳು ಸಾಧನೆಯಾಗಿ ಮಾರ್ಪಟ್ಟಂತೆ ಬದುಕು ಪ್ರವಹಿಸಿದ ರೀತಿ ಬೀರಿದ ಪ್ರಭಾವದಿಂದ ಈ ಲೇಖನ ಹೊಮ್ಮಿದೆ.
ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ, ದೇಶದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 3,251 ಜನ ಕಾಡುಪ್ರಾಣಿಗಳಿಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ ಈ ಸಂಖ್ಯೆ 259. ಅಂದರೆ, ವರ್ಷಕ್ಕೆ ಸರಾಸರಿ 55-60 ಜನರ ಸಾವು ಸಂಭವಿಸಿದೆ.
special