ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳನ್ನು ಅವಲೋಕಿಸಿ, ಅವುಗಳ ಮಹತ್ವವನ್ನು ತಿಳಿಸುವ, ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಎಂ. ಮಹೇಶ್ ಮಾಡಿದ್ದಾರೆ. ಮೂಡ್ನಾಕೂಡು ಅವರು ಈವರೆಗೆ ವಿಷಯ ವೈವಿಧ್ಯತೆಯಿಂದ ಕೂಡಿದ ಒಂಭತ್ತು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದರೂ ಅವುಗಳ ಆಶಯ ಸಮಾನತೆಯ ಸಮಾಜದ ಕನಸು.