ಐಪಿಎಲ್‌ ಹರಾಜಿಗೆ ಅನುಕೂಲ ಮಾಡಲು 2 ಹಂತದಲ್ಲಿ ರಣಜಿ ಕ್ರಿಕೆಟ್‌

KannadaprabhaNewsNetwork |  
Published : May 12, 2024, 01:15 AM ISTUpdated : May 12, 2024, 04:30 AM IST
ರಣಜಿ ಟ್ರೋಫಿ | Kannada Prabha

ಸಾರಾಂಶ

ರಣಜಿ ಮಧ್ಯೆ ಮುಷ್ತಾಕ್‌ ಅಲಿ, ವಿಜಯ್‌ ಹಜಾರೆ ನಡೆಸಲು ಬಿಸಿಸಿಐ ಚಿಂತನೆ. ಇದರಿಂದ ಐಪಿಎಲ್‌ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ದೇಸಿ ಆಟಗಾರರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ.

ನವದೆಹಲಿ: ಭಾರತದ ಯುವ ಕ್ರಿಕೆಟಿಗರು ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳುವಂತಾಗಲು ರಣಜಿ ಟೂರ್ನಿಯನ್ನು 2 ಹಂತದಲ್ಲಿ ನಡೆಸಲು ಹಾಗೂ ಇದರ ನಡುವೆ ಸೆಯ್ಯದ್‌ ಮುಷ್ತಾಕ್‌ ಅಲಿ ಟಿ20 ಹಾಗೂ ವಿಜಯ್‌ ಹಜಾರೆ ಏಕದಿನ ಟೂರ್ನಿ ನಡೆಸಲು ಬಿಸಿಸಿಐ ಉದ್ದೇಶಿಸಿದೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಕೋಚ್‌ ರಾಹುಲ್‌ ದ್ರಾವಿಡ್‌, ಭಾರತದ ನಾಯಕ ರೋಹಿತ್‌ ಶರ್ಮಾ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಮಾತುಕತೆ ನಡೆಸಿದ್ದು, ಪ್ರಸ್ತಾವನೆಯನ್ನು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಮುಂದಿಡಲಾಗಿದೆ. 2024-25ರ ಋತುವಿನಲ್ಲೇ ಇದು ಜಾರಿಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತಾವನೆ ಪ್ರಕಾರ ಅಕ್ಟೋಬರ್‌ನಲ್ಲೇ ರಣಜಿ ಆರಂಭವಾಗಲಿದ್ದು, 5 ಪಂದ್ಯಗಳು ನಡೆಯಲಿವೆ. 

ಬಳಿಕ ಮುಷ್ತಾಕ್‌ ಅಲಿ, ವಿಜಯ್‌ ಹಜಾರೆ ಟೂರ್ನಿ ನಡೆಯಲಿವೆ. ಇದರಿಂದ ಐಪಿಎಲ್‌ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ದೇಸಿ ಆಟಗಾರರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಆ ಬಳಿಕ ರಣಜಿಯ ಉಳಿದ 2 ಪಂದ್ಯಗಳು, ನಾಕೌಟ್‌ ಪಂದ್ಯಗಳು ನಡೆಯಲಿವೆ. ಇನ್ನು, ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ರಣಜಿ ಟೂರ್ನಿ ಮಧ್ಯೆ ವಿಶ್ರಾಂತಿ ದಿನಗಳನ್ನೂ ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ.

ಸಿ.ಕೆ.ನಾಯ್ಡು: ಟಾಸ್‌ ರದ್ದು!

ಇನ್ನು, ಸಿ.ಕೆ.ನಾಯ್ಡು ಅಂಡರ್‌-23 ಟೂರ್ನಿಯಲ್ಲಿ ಟಾಸ್‌ ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ. ಪ್ರವಾಸಿ ತಂಡ ನೇರವಾಗಿ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ. ಇದರಿಂದ ಪಂದ್ಯಗಳು ಏಕಮುಖವಾಗುವುದನ್ನು ತಪ್ಪಿಸಬಹುದು ಎಂಬುದು ಬಿಸಿಸಿಐ ಯೋಜನೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!