ಬೆಂಗಳೂರು : ಮಯಾಂಕ್‌, ಮನೀಶ್‌, ವೃಂದಾ, ವಿದ್ವತ್‌ಗೆ ಕೆಎಸ್‌ಸಿಎ ವಾರ್ಷಿಕ ಅವಾರ್ಡ್‌

KannadaprabhaNewsNetwork |  
Published : Dec 29, 2024, 01:20 AM ISTUpdated : Dec 29, 2024, 04:00 AM IST
Cricket ball and stumps

ಸಾರಾಂಶ

ದ್ರಾವಿಡ್‌ ಪುತ್ರ ಅನ್ವಯ್‌ಗೂ ವಾರ್ಷಿಕ ಪ್ರಶಸ್ತಿ. ಮಯಾಂಕ್‌ ಸೇರಿ ಪ್ರಮುಖರು ವಿಜಯ್‌ ಹಜಾರೆ ಟೂರ್ನಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾದರು.

 ಬೆಂಗಳೂರು  : ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ ಸೇರಿದಂತೆ ಪ್ರಮುಖರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಮಯಾಂಕ್‌ ಸೇರಿ ಪ್ರಮುಖರು ವಿಜಯ್‌ ಹಜಾರೆ ಟೂರ್ನಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾದರು. ಮಯಾಂಕ್‌ 2022-23ರ ರಣಜಿ, 2023-24ರ ಮುಷ್ತಾಕ್‌ ಅಲಿ ಟಿ20ಯ ಗರಿಷ್ಠ ಸ್ಕೋರರ್‌ ಪ್ರಶಸ್ತಿ, ಮನೀಶ್‌ 2022-23ರ ಮುಷ್ತಾಕ್‌ ಅಲಿ ಟಿ20ಯ ಗರಿಷ್ಠ ಸ್ಕೋರರ್‌, ದೇವದತ್‌ ಪಡಿಕ್ಕಲ್‌ 2023-24ರ ವಿಜಯ್‌ ಹಜಾರೆ, ರಣಜಿಯ ಗರಿಷ್ಠ ಸ್ಕೋರರ್‌ ಪ್ರಶಸ್ತಿ ಪಡೆದರು. ವೃಂದಾ ದಿನೇಶ್‌ ಮಹಿಳಾ ವಿಭಾಗದಲ್ಲಿ 4 ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ರಾಹುಲ್‌ ದ್ರಾವಿಡ್‌ ಪುತ್ರ ಅನ್ವಯ್ ಅಂಡರ್‌-14, ವಿಜಯ್‌ ಮರ್ಚಂಟ್‌ ಟೂರ್ನಿಗಳ ಗರಿಷ್ಠ ರನ್‌ ಸರದಾರ ಪ್ರಶಸ್ತಿ ಜಯಿಸಿದರು. ನಿಕಿನ್‌ ಜೋಸ್, ಕೌಶಿಕ್‌, ವಿದ್ವತ್ ಕಾವೇರಪ್ಪ, ವೈಶಾಖ್‌, ಗೌತಮ್‌ ಕೂಡಾ ವಿವಿಧ ಪ್ರಶಸ್ತಿ ಗೆದ್ದರು.

1ನೇ ಟೆಸ್ಟ್‌: ಆಫ್ಘನ್‌ ತಿರುಗೇಟು, 425/2ಬುಲವಾಯೊ: ಮೊದಲ ಟೆಸ್ಟ್‌ನಲ್ಲಿ ಜಿಂಬಾಬ್ವೆ ತಂಡಕ್ಕೆ ಅಫ್ಘಾನಿಸ್ತಾನ ತಿರುಗೇಟು ನೀಡಿದೆ. ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 586 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಆಫ್ಘನ್‌, 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 425 ರನ್‌ ಕಲೆಹಾಕಿದ್ದಯ, ಇನ್ನು 161 ರನ್‌ ಹಿನ್ನಡೆಯಲ್ಲಿದೆ. 64ಕ್ಕೆ 2 ವಿಕೆಟ್ ಕಳೆದುಕೊಂಡ ಬಳಿಕ ಮುರಿಯದ 3ನೇ ವಿಕೆಟ್‌ಗೆ ರಹ್ಮತ್‌ ಶಾ ಹಾಗೂ ಹಶ್ಮತುಲ್ಲಾಹ್‌ ಶಾಹಿದಿ 361 ರನ್‌ ಜೊತೆಯಾಟವಾಡಿದರು. ರಹ್ಮತ್‌ 231, ಶಾಹಿದಿ 141 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ