ಪಿಟಿಐ ಢಾಕಾ
ಶೇಖ್ ಹಸೀನಾ ಸರ್ಕಾರದ ಪತನದ ನಂತರ ಹಿಂದೂ ದೇಗುಲಗಳು ಹಾಗೂ ಆಸ್ತಿಪಾಸ್ತಿಗಳ ಮೇಲೆ ಪುಂಡರು ಅವ್ಯಾಹತ ದಾಳಿ ಮಾಡಿದ್ದರು. ಇದರಿಂದ ಬೆಚ್ಚಿದ ಹಿಂದೂಗಳು ಭಾರತಕ್ಕೆ ವಲಸೆ ಹೋಗುವ ಯೋಚನೆ ಮಾಡಿದ್ದರು.
ದಾಳಿಕೋರರ ಮೇಲೆ ಕ್ರಮ- ಯೂನಸ್:ಹಿಂದೂಗಳಲ್ಲಿನ ಆತಂಕ ದೂರ ಮಾಡಲು ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನಸ್ ಮಂಗಳವಾರ ಢಾಕೇಶ್ವರಿ ದೇಗುಲಕ್ಕೆಭೇಟಿ ನೀಡಿದರು. ಈ ವೇಳೆ ಅವರು ಮಾತನಾಡಿ, ‘ಹಿಂದೂಗಳ ರಕ್ಷಣೆ ಮಾಡುತ್ತೇವೆ. ನಾವೆಲ್ಲ ಒಂದೇ ಕುಟುಂಬ ಇದ್ದಂತೆ. ಯಾರ ಬಗ್ಗೆಯೂ ತಾರತಮ್ಯ ಮಾಡುವುದಿಲ್ಲ. ಹಿಂದೂಗಳ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು.
ಅಲ್ಲದೆ, ‘ನಮಗೆಲ್ಲರಿಗೂ ಇರುವ ಹಕ್ಕುಗಳು ಒಂದೇ. ನಮ್ಮನ್ನು ವಿಭಜಿಸಬೇಡಿ. ದೇಶದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಸಾಂಸ್ಥಿಕ ಅವನತಿಯೇ ಕಾರಣ. ತಾಳ್ಮೆಯಿಂದ ನಮ್ಮ ಆಡಳಿತವನ್ನು ನೋಡಿ ನಂತರ ಆ ಬಗ್ಗೆ ವಿಮರ್ಶೆ ಮಾಡಿ. ಒಂದು ವೇಳೆ ನಾನು ವಿಫಲನಾದರೆ ನಂತರ ಟೀಕಿಸಿ’ ಎಂದರು.ಸಹಾಯವಾಣಿ ಆರಂಭ:
ಈ ನಡುವೆ, ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನ, ಮನೆ, ಆಸ್ತಿಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದಂತೆ ಅವುಗಳ ರಕ್ಷಣೆಗೆ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಹಿಂದೂಗಳು ಸೇರಿದಂತೆ ಬಾಂಗ್ಲಾದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆದರೆ ಅಥವಾ ದಾಳಿಯ ಸುಳಿವು ಸಿಕ್ಕರೆ 01766-843809 ಗೆ ಕರೆ ಮಾಡಿ ಅಥವಾ ಈ ಸಂಖ್ಯೆಗೆ ಸಂದೇಶ ಕಳಿಸಿ ಎಂದು ಬಾಂಗ್ಲಾ ಸರ್ಕಾರ ಕೋರಿದೆ.--