ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ಮಧುಗಿರಿ ತಾಲೂಕಿನ ಬಡವನಹಳ್ಳಿಯ ಶಿವಕುಮಾರ್ (44), ಚನ್ನೇಗೌಡನದೊಡ್ಡಿಯ ಗೇಟ್ ಮನ್ ಕುಮಾರ (36), ಚನ್ನೇಗೌಡನದೊಡ್ಡಿಯ ಶಿವಕುಮಾರ್ (40) ಹಾಗೂ ಆರೋಪಿಗಳಾದ ಮೈಸೂರಿನ ಗೌಸಿಯಾನಗರದ ಖುರೇಶಿ (27), ವಾಸಿಂ (23), ಕ್ಯಾತನಹಳ್ಳಿಯ ಸೊಯೇಬ್ (20) ಗಾಯಗೊಂಡವರು.
ಘಟನೆ ವಿವರ:ಮೈಸೂರಿನ ಗೌಶಿಯಾ ಬಡಾವಣೆಯ ಖುರೇಶಿ ತನ್ನ ಪತ್ನಿ ಸುಬಾನ್, ಇಬ್ಬರು ಮಕ್ಕಳು ಹಾಗೂ ಸುಜಾತ ಎಂಬ ಹಿಂದೂ ಹೆಣ್ಣು ಮಗಳು ಮತ್ತು ಸ್ನೇಹಿತರಾದ ವಾಸಿಂ, ಸೋಯೇಬ್ ಅವರೊಂದಿಗೆ ಚಿಂತಾಮಣಿಯಲ್ಲಿ ನಡೆಯುತ್ತಿದ್ದ ದರ್ಗಾ ಉತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ರಾಜರಾಣಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಇದರಿಂದ ಕುಪಿತಗೊಂಡ ಆರೋಪಿಗಳು ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಸಾಲದೆಂಬಂತೆ ಅವರ ಕಿಬ್ಬೊಟ್ಟೆ, ತೋಳಿನ ಮೇಲೂ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಆತಂಕಗೊಂಡ ಶಿವಕುಮಾರ್ ಅವರು ರೈಲಿನ ಚೈನು ಎಳೆದಿದ್ದಾರೆ. ಚನ್ನೇಗೌಡನದೊಡ್ಡಿ ಬಳಿ ನಿಂತಿದೆ. ರೈಲು ನಿಲ್ಲುತ್ತಿದ್ದಂತೆ ಆರೋಪಿಗಳು ರೈಲಿನಿಂದ ಇಳಿದು ಹೊರಗೆ ಓಡಲು ಪ್ರಾರಂಭಿಸಿದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆರೋಪಿಗಳನ್ನು ಹಿಡಿಯುವಂತೆ ಕೂಗಿಕೊಂಡಿದ್ದಾರೆ.
ಈ ದೃಶ್ಯವನ್ನು ಕಂಡ ಸಾರ್ವಜನಿಕರು ತಕ್ಷಣ ಆರೋಪಿಗಳನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರ ಧರ್ಮದೇಟಿನಿಂದ ಮೂವರು ಆರೋಪಿಗಳಿಗೂ ಗಾಯಗಳಾಗಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಗ್ರಾಮಾಂತರ ಠಾಣೆ ಪಿಎಸ್ಐ ನಾರಾಯಣಿ ಮತ್ತು ಸಿಬ್ಬಂದಿ ಗುಂಪನ್ನು ಚದುರಿಸಿ ಯುವಕರನ್ನು ವಶಕ್ಕೆ ಪಡೆದು ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.