ಕಟಿಂಗ್‌ ಹಣದ ವಿಚಾರಕ್ಕೆ ಸೋದರರ ಜಗಳ : ಬಿಡಿಸಲು ಹೋದ ತಾಯಿ ಕೊಲೆ

KannadaprabhaNewsNetwork |  
Published : May 31, 2025, 12:12 AM ISTUpdated : May 31, 2025, 04:19 AM IST
Crime News

ಸಾರಾಂಶ

ಕಟಿಂಗ್ ಮಾಡಿದ ಹಣದ ವಿಚಾರವಾಗಿ ಸಹೋದರರ ಮಧ್ಯೆ ಜಗಳ ನಡೆದಿದ್ದು, ಜಗಳ ಬಿಡಿಸಲು ಹೋದ ತಾಯಿಯನ್ನೇ ಕಿಟಕಿಯ ಗ್ಲಾಸ್‌ನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ತೊರವಿಹಕ್ಕಲ ಬಡಾವಣೆಯಲ್ಲಿ ಗುರುವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 ಹುಬ್ಬಳ್ಳಿ : ಕಟಿಂಗ್ ಮಾಡಿದ ಹಣದ ವಿಚಾರವಾಗಿ ಸಹೋದರರ ಮಧ್ಯೆ ಜಗಳ ನಡೆದಿದ್ದು, ಜಗಳ ಬಿಡಿಸಲು ಹೋದ ತಾಯಿಯನ್ನೇ ಕಿಟಕಿಯ ಗ್ಲಾಸ್‌ನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ತೊರವಿಹಕ್ಕಲ ಬಡಾವಣೆಯಲ್ಲಿ ಗುರುವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪದ್ಮಾ ಚಲೂರಿ (46) ಕೊಲೆಯಾದ ಮಹಿಳೆ. ಮೃತರ ಮಕ್ಕಳಾದ ಮಂಜುನಾಥ ಮತ್ತು ಲಕ್ಷ್ಮಣ ತಮ್ಮ ಮನೆಯ ಕೆಳಭಾಗದಲ್ಲಿ ಸಲೂನ್‌ ಇಟ್ಟುಕೊಂಡಿದ್ದರು. ಇವರಿಬ್ಬರ ನಡುವೆ ಗುರುವಾರ ಮಧ್ಯಾಹ್ನ ಕಟಿಂಗ್ ಮಾಡಿದ ಹಣಕ್ಕಾಗಿ ಜಗಳ ಆರಂಭವಾಗಿ ಕಮರಿಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಆದರೆ ಗುರುವಾರ ಮಂಜುನಾಥ ಲಕ್ಷ್ಮಣ ಜತೆ ಮತ್ತೆ ಜಗಳ ಆರಂಭಿಸಿದ್ದಾನೆ. ಆಗ ಜಗಳ ಬಿಡಿಸಲು ಮುಂದಾದ ತಾಯಿಯನ್ನು ಮಂಜುನಾಥ ಕಿಟಕಿಯ ಗ್ಲಾಸ್‌ ತೆಗೆದುಕೊಂಡು ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ತಾಯಿಯನ್ನು ತಕ್ಷಣ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌