)
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ದೂರು ನೀಡಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಉಬರ್ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಮ್ಮ ಸ್ನೇಹಿತರ ಜತೆ ರಾತ್ರಿ ಪಾರ್ಟಿ ಮುಗಿಸಿ ಸಂತ್ರಸ್ತ ಮನೆಗೆ ಮರಳುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ದೂರಿನ ವಿವರ:ಇತ್ತೀಚೆಗೆ ತಮ್ಮ ಐವರು ಸ್ನೇಹಿತರ ಜತೆ ಬೂದಿಗೆರೆ ಸಮೀಪದ ಡಾಬಾದಲ್ಲಿ ರಾತ್ರಿ ದೂರುದಾರರು ಪಾರ್ಟಿ ಮಾಡಿದ್ದರು. ನಂತರ ಅಲ್ಲಿಂದ ಮನೆಗೆ ಮರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ಯಾಬ್ ಚಾಲಕ, ಸಂತ್ರಸ್ತನನ್ನು ಕ್ಯಾಬ್ ಹತ್ತಿಸಿಕೊಂಡು ಹೊರಟನು. ಅಲ್ಲದೆ ಆತನಿಂದ ಮುಂಗಡ ಹಣ ಸಹ ಪಡೆದಿದ್ದ. ‘ಪಾರ್ಟಿ’ ಪರಿಣಾಮ ಕ್ಯಾಬ್ ಹತ್ತಿದ ಕೆಲವೇ ನಿಮಿಷಗಳಲ್ಲಿ ದೂರುದಾರರು ನಿದ್ರೆಗೆ ಜಾರಿದ್ದಾರೆ. ಆಗ ಕಾಟಂನಲ್ಲೂರಿನ ಓರಿಯನ್ ಅಪ್ಟೌನ್ ಬಳಿ ಕ್ಯಾಬ್ ನಿಲ್ಲಿಸಿದ ಆತ, ನಿಮ್ಮ ಜಾಗ ಬಂದಿದೆ ಎಂದು ದೂರುದಾರನನ್ನು ಕ್ಯಾಬ್ನಿಂದಿಳಿಸಿ ಹೊರಟಿದ್ದಾನೆ.
ಚಾಲಕಿ ಚಾಲಕ!
ನಿಗದಿತ ಜಾಗ ತಲುಪುವ ಮುನ್ನವೇ ಪ್ರಯಾಣ ಅಂತ್ಯಗೊಳಿಸಿದರೆ ಕಂಪನಿಗೆ ಗೊತ್ತಾಗಲಿದೆ ಎಂದು ಜಾಗ್ರತೆ ವಹಿಸಿದ ಚಾಲಕಿ ಚಾಲಕ, ಕಾಟಂನಲ್ಲೂರಿನ ಬಳಿಯೇ ಪ್ರಯಾಣಿಕನನ್ನು ಇಳಿಸಿ ಡ್ರಾಪ್ ಲೊಕೇಶನ್ ಆಧರಿಸಿ ಮನೆ ಬಳಿ ತೆರಳಿ ಮರಳಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ತಮ್ಮ ಪ್ರತಿ ಕ್ಯಾಬ್ನ ಪ್ರಯಾಣದ ಟ್ರಿಪ್ಗಳ ಪೂರ್ಣ ಮಾಹಿತಿ ಕಂಪನಿ ಬಳಿ ಇರಲಿದೆ. ಪ್ರಯಾಣದ ಲೊಕೇಶನ್ ಕೂಡ ಟ್ರ್ಯಾಕ್ನಲ್ಲಿರುತ್ತದೆ. ಹೀಗಾಗಿ ಒಂದು ಪ್ರಯಾಣದ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆದರೆ ಕಂಪನಿಗೆ ತಕ್ಷಣವೇ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಈ ಬಗ್ಗೆ ತಿಳಿದುಕೊಂಡೇ ಚಾಲಕ, ದಾರಿ ಮಧ್ಯೆ ಗ್ರಾಹಕನನ್ನು ಇಳಿಸಿದರೂ ಅವರ ಮನೆ ಬಳಿ ಹೋಗಿ ಮರಳಿದ್ದಾನೆ ಎಂದು ಮೂಲಗಳು ಹೇಳಿವೆ.ಹೊರ ರಾಜ್ಯದ ಚಾಲಕಈ ಕೃತ್ಯ ಎಸಗಿದ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಚಾಲಕ ಪರಾರಿಯಾಗಿದ್ದಾನೆ. ಆತ ಹೊರ ರಾಜ್ಯದವನಾಗಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊರ ರಾಜ್ಯದ ಚಾಲಕಈ ಕೃತ್ಯ ಎಸಗಿದ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಚಾಲಕ ಪರಾರಿಯಾಗಿದ್ದಾನೆ. ಆತ ಹೊರ ರಾಜ್ಯದವನಾಗಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.