ಹಲಗೂರು:
ನಮಗೆ ನಮ್ಮ ನಾಯಿ ಮತ್ತು ಹಸು ಕರುಗಳು ಕಿರುಚಿದ ಸದ್ದಿನಿಂದ ಬಂದು ನೋಡಿದಾಗ ಚಿರತೆ ಕೃತ್ಯ ಕಂಡುಬಂದಿದೆ. ತಕ್ಷಣ ಮಳವಳ್ಳಿ ಮತ್ತು ಹಲಗೂರು ಅರಣ್ಯ ಇಲಾಖೆ ಗಸ್ತು ಪಾಲಕ ಕೃಷ್ಣ ಅವರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದ ಅವರು ಸ್ಥಳ ಪರಿಶೀಲಿಸಿ ಪಶು ವೈದಾಧಿಕಾರಿ ಪ್ರವೀಣ್ ಅವರಿಂದ ಕರುವಿನ ಶವಪರೀಕ್ಷೆ ನಡೆಸಿದ್ದಾರೆ.
ರಾತ್ರಿ ವೇಳೆ ಚಿರತೆ ಬರುತ್ತಿರುವುದರಿಂದ ಭಯಪಡುವ ಪರಿಸ್ಥಿತಿ ಇದೆ. ನಮಗೆ ರಕ್ಷಣೆ ಇಲ್ಲ. ಆದ್ದರಿಂದ ಚಿರತೆ ಹಿಡಿಯುವ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುವ ಜೊತೆಗೆ ನಮಗೆ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಪತ್ರ ಸಲ್ಲಿಸಿದರು.ಅರಣ್ಯ ಇಲಾಖೆ ಕೃಷ್ಣ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈಗಾಗಲೇ ಬೆಳ್ತೂರು ಗ್ರಾಮದಲ್ಲಿ ಇಟ್ಟಿರುವ ಬೋನನ್ನು ಬಾಣಗಳ್ಳಿ ರಮೇಶ್ ಅವರ ಜಮೀನಿನಲ್ಲಿ ಇಟ್ಟಿದ್ದೇವೆ. ಅವರಿಗೆ ನಷ್ಟಕ್ಕೆ ಮನವಿ ಪತ್ರವನ್ನು ನಮ್ಮ ಅಧಿಕಾರಿಗಳ ಅವರಿಗೆ ತಲುಪಿಸಿ ಸರ್ಕಾರದಿಂದ ಸಿಗುವ ಹಣವನ್ನು ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು. ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ದುಷ್ಕರ್ಮಿಗಳಿಂದ ಕೊಲೆ
ಸುಮಾರು 18-19 ವರ್ಷದ ವಯಸ್ಸಿನ ಯುವತಿ ಶವ ಇರಬಹುದು ಎಂದು ಅಂದಾಜಿಸಲಾಗಿದೆ. ದುಷ್ಕರ್ಮಿಗಳು ಯುವತಿಯನ್ನು ಬೇರೆಡೆ ಕೊಲೆ ಮಾಡಿ ಸಾಕ್ಷಿ ನಾಶಕ್ಕಾಗಿ ಶವವನ್ನು ಜವನಗಹಳ್ಳಿ ಗುಡ್ಡದ ಬಳಿಯ ನಿರ್ಜನ ಪ್ರದೇಶಕ್ಕೆ ತಂದು ಪೆಟ್ರೋಲ್ ಅಥವಾ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಸ್ಥಳೀಯ ಮುಖಂಡ ರಘು ಅವರು ಬುಧವಾರ ರಾತ್ರಿ ಅರೆಬೆಂದ ಸ್ಥಿತಿಯ ಶವವನ್ನು ಕಂಡು ಬೆಳಕವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಳಕವಾಡಿ ಪಿಎಸ್ಐ ಪ್ರಕಾಶ್ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.