ಸಾಬೀತಾದರೆ ಬಂಧನಕ್ಕೆ ಸಿದ್ಧ: ಎಲ್ವಿಶ್
ಬುಧವಾರ ನೋಯ್ಡಾ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅವರು. ‘ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಆರೋಪ ಸಾಬೀತಾದಲ್ಲಿ ಬಂಧನಕ್ಕೆ ಸಿದ್ದ. ನನ್ನನ್ನು ತಪ್ಪಾಗಿ ಇದರಲ್ಲಿ ಸಿಕ್ಕಿಸಲಾಗಿದೆ’ ಎಂದರು.‘ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ತಡರಾತ್ರಿ ನೋಯ್ಡಾ ಪೊಲೀಸರು ಯೂಟ್ಯೂಬರ್ ಎಲ್ವಿಶ್ ಅವರನ್ನು ವಿಚಾರಣೆ ನಡೆಸಿದ್ದರು. ಈಗ ಮತ್ತೆ ವಿಚಾರಣೆಗೆ ಕರೆಯಲಾಗಿದೆ’ ಎಂದು ನೋಯ್ಡಾ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಹರೀಶ್ ಚಂದರ್ ಹೇಳಿದರು. ಪ್ರಕರಣದಲ್ಲಿ ಹೆಸರಿಸಲಾದ ಐವರು ಆರೋಪಿಗಳ ಪೈಕಿ ಎಲ್ವಿಶ್ ಅವರೂ ಒಬ್ಬರಾಗಿದ್ದಾರೆ. ಗೌತಮ್ ಬುದ್ಧ ನಗರದ ಪೊಲೀಸ್ ಆಯುಕ್ತ ಲಕ್ಷ್ಮಿ ಸಿಂಗ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ವಲಯ 49 ರಿಂದ ವಲಯ 20ರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.