ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮದ ರಂಗಪ್ಪ (75) ಮೃತಪಟ್ಟ ದುರ್ದೈವಿ ರೈತ. ವೃದ್ಧ ರೈತ ರಂಗಪ್ಪ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ನೂರಾರು ಹೆಜ್ಜೇನು ಕಚ್ಚಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಲು ಪ್ರಯತ್ನಿಸಿದರೂ ಕೂಡ ಅಷ್ಟರೊಳಗೆ ಅಪಾರ ಪ್ರಮಾಣದ ಜೇನುಹುಳುಗಳು ರಂಗಪ್ಪ ಅವರ ತಲೆ, ಮುಖ ಹಾಗೂ ಎರಡೂ ಕೈಗಳ ತುಂಬೆಲ್ಲಾ ಕಚ್ಚಿದ್ದರಿಂದ ನೀರಿನ ತೊಟ್ಟಿ ಬಳಿಯೇ ರೈತ ಅಸ್ವಸ್ತಗೊಂಡು ಬಿದಿದ್ದರು.
ಇದೇ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಯುವಕನ ಮೇಲೂ ಕೆಲವು ಜೇನುಹುಳುಗಳು ದಾಳಿ ನಡೆಸಿದ್ದು ಯುವಕ ತಕ್ಷಣವೇ ಎಚ್ಚೆತ್ತು ಆ ಜಾಗದಿಂದ ಓಡಿ ಹತ್ತಿರದಲ್ಲಿದ್ದ ಮನೆಗೆ ಹೋಗಿ ತನ್ನನ್ನು ರಕ್ಷಿಸಿಕೊಂಡು ಮೃತ ರೈತನ ಮೇಲಿನ ಹೆಜ್ಜೇನು ದಾಳಿ ವಿಷಯ ತಿಳಿಸಿದ್ದಾನೆ.ಸುದ್ದಿ ತಿಳಿದು ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ರೈತ ರಂಗಪ್ಪ ಕೊನೆಯುಸಿರೆಳೆದಿದ್ದರು. ಮೃತ ರೈತನಿಗೆ ಪತ್ನಿ, ಪುತ್ರಿ ಹಾಗೂ ಮೂವರು ಗಂಡುಮಕ್ಕಳಿದ್ದಾರೆ. ಮಂಗಳವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಮೃತ ರೈತನ ಅಂತ್ಯಕ್ರಿಯೆ ನೆರವೇರಿತು.ಅಪ್ರಾಪ್ತನಿಂದ ಅಪಘಾತ: ಬೈಕ್ ಮಾಲೀಕನಿಗೆ 29 ಸಾವಿರ ರು. ದಂಡಮಳವಳ್ಳಿ:ಅಪ್ರಾಪ್ತನಿಗೆ ಚಾಲನೆ ಮಾಡಲು ಬೈಕ್ ನೀಡಿ ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್ಸಿ ನ್ಯಾಯಾಲಯ 29 ಸಾವಿರ ರು. ದಂಡ ಹಾಗೂ ಎರಡು ದಿನಗಳ ಸಜಾ ಶಿಕ್ಷೆ ನೀಡಿ ತೀರ್ಪು ನೀಡಿದೆ.