ಸ್ನಾನ ಮಾಡುತ್ತಿದ್ದ ವೇಳೆ ಕಾಮುಕನಿಂದ ಕಿರುಕುಳ : ನೊಂದ ಗೃಹಿಣಿಯಿಂದ ಪೊಲೀಸ್‌ ಠಾಣೆಗೆ ದೂರು..!

KannadaprabhaNewsNetwork |  
Published : Feb 14, 2025, 12:31 AM ISTUpdated : Feb 14, 2025, 04:16 AM IST
ಕಾಮುಕನಿಂದ ಕಿರುಕುಳ | Kannada Prabha

ಸಾರಾಂಶ

ಗೃಹಿಣಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ವ್ಯಕ್ತಿ ಸ್ನಾನದ ಮನೆಗೆ ನುಗ್ಗಿ ಮುತ್ತುಕೊಟ್ಟು ಮೈಮುಟ್ಟಿ ಬಲವಂತ ಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೊಂದ ಗೃಹಿಣಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ಪಾಂಡವಪುರ : ಗೃಹಿಣಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ವ್ಯಕ್ತಿ ಸ್ನಾನದ ಮನೆಗೆ ನುಗ್ಗಿ ಮುತ್ತುಕೊಟ್ಟು ಮೈಮುಟ್ಟಿ ಬಲವಂತ ಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ನೊಂದ ಗೃಹಿಣಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಲೂಕಿನ ತಾಳಶಾಸನ ಗ್ರಾಮದ ಬಾವಪ್ಪರವರ ಸತೀಶ್ ಎಂಬ ಕಾಮುಕ ಕಳೆದ ಫೆ.10ರಂದು ಅದೇ ಗ್ರಾಮದ ಗೃಹಿಣಿಗೆ ಮನೆ ಹಿಂಭಾಗ ಸ್ನಾನದ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಯಾರು ಇಲ್ಲದ ಸಮಯ ನೋಡಿಕೊಂಡು ಗುದ್ದಲಿ ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ್ದಾನೆ.

ಸ್ನಾನ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿ ನನಗೆ ನೀನು ಅಂದರೆ ಇಷ್ಟ ಈ ವಿಷಯ ಯಾರಿಗೂ ಹೇಳಬೇಡ ಎಂದು ಹೇಳಿ ಮಹಿಳೆ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ. ಬಳಿಕ ಮಹಿಳೆ ಮೈಮುಟ್ಟಿ ಬಲವಂತಪಡಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿಕೊಂಡ ತಕ್ಷಣ ಆಕೆಯನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮನೆಯಲ್ಲಿ ಗಂಡ, ಅತ್ತಿ, ಮೈದುನ ಯಾರು ಇಲ್ಲದ ಕಾರಣ ವಿಷಯವನ್ನು ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯಾರಿಗೂ ತಿಳಿಸಿಲ್ಲ. ಮಾರನೇ ದಿನವೂ ಫೆ.11ರಂದು ಮತ್ತೆ ಮನೆ ಬಳಿ ಬಂದು ಅಸಭ್ಯವಾಗಿ ಮಾತನಾಡಿದ್ದಾನೆ.

ಬಳಿಕ ಮಹಿಳೆ ಮನೆಯವರಿಗೆ ವಿಷಯ ಮುಟ್ಟಿಸಿ ಫೆ.12ರಂದು ಪಾಂಡವಪುರ ಪೊಲೀಸ್ ಠಾಣೆಗೆ ಆಗಮಿಸಿ ದೌರ್ಜನ್ಯ ನಡೆಸಿ ಕಾಮುಕ ಬಾವಪ್ಪರವರ ಸತೀಶ್ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಕಾಮಕ ಸತೀಶ್ ಊರಿಂದ ಪರಾರಿಯಾಗಿದ್ದಾನೆ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಹುಡುಕಾಟಕ್ಕಾಗಿ ಕ್ರಮಕೈಗೊಂಡಿದ್ದಾರೆ.

ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಸಾಂತ್ವನ:

ವಿಷಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ನವೀನ್‌ಕುಮಾರ್, ಮೈಷಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಅವರು ಗುರುವಾರ ಮನೆಗೆ ತೆರಳಿ ಸಂತ್ರಸ್ತ ಮಹಿಳೆ ಸಾಂತ್ವನ ಹೇಳಿದರು. ಬಳಿಕ ಪೊಲೀಸ್ ಠಾಣೆಗೂ ಭೇಟಿಕೊಟ್ಟು ಕೃತ್ಯವೆಸಗಿರುವ ಆರೋಪಿ ಸತೀಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಕದೀಮರಿಗೆ ಸಾರ್ವಜನಿಕರಿಂದ ಧರ್ಮದೇಟು..!