ಕನ್ನಡಪ್ರಭ ವಾರ್ತೆ ಬೆಂಗಳೂರು
ಬಹಳ ಹಿಂದಿನ ಪ್ರವಾಸ ಕತೆ ಇದಾಗಿದ್ದು, ವಂಚನೆ ಪ್ರಕರಣದ ವೇಳೆ ಜಪ್ತಿಯಾದ ಐಶ್ವರ್ಯಾಗೌಡಳ ಮೊಬೈಲ್ಗಳ ಪರಿಶೀಲನೆ ವೇಳೆ ಪೊಲೀಸ್ ಅಧಿಕಾರಿ ಜತೆ ಪ್ರವಾಸದ ಫೋಟೋಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುವಾಗ ಐಶ್ವರ್ಯಾ ಜತೆ ಆ ಇನ್ಸ್ಪೆಕ್ಟರ್ಗೆ ಆತ್ಮೀಯತೆ ಇತ್ತು. ಇದೇ ಗೆಳೆತನದಲ್ಲಿ ಆಕೆಗೆ ಸಿಡಿಆರ್ ಅನ್ನು ಇನ್ಸ್ಪೆಕ್ಟರ್ ನೀಡಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತವಾಗಿದೆ.
ಈ ಶಂಕೆ ಹಿನ್ನೆಲೆಯಲ್ಲಿ ಸಿಡಿಆರ್ ಪ್ರಕರಣದಲ್ಲಿ ಇನ್ಸ್ಪೆಕ್ಟರ್ಗೆ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿದ್ದು, ಐಶ್ವರ್ಯಾಳ ವಿಚಾರಣೆ ಬಳಿಕ ಆ ಇನ್ಸ್ಪೆಕ್ಟರ್ಗೆ ತನಿಖಾಧಿಕಾರಿ ಆಗಿರುವ ಉಪ ವಿಭಾಗದ ಚಂದನ್ ಕುಮಾರ್ ನೋಟಿಸ್ ಜಾರಿಗೊಳಿಸಬಹುದು ಎನ್ನಲಾಗಿದೆ.