ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬಳ್ಳೇಕೆರೆ ಗ್ರಾಮದ ಪಟ್ಟಣದ ನಿವಾಸಿ ಹರೀಶ್(30) ಸಾವಿಗೀಡಾದವರು.
ಕೆ.ಆರ್.ಪೇಟೆ ಯಿಂದ ಬೆಂಗಳೂರಿನ ಶ್ರೀನಗರಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ನಿಲ್ದಾಣ ಬಳಿಯ ಫುಟ್ಪಾತ್ ನಲ್ಲಿ ನಿಂತಿದ್ದ ಹರೀಶ್ ರಸ್ತೆಯನ್ನು ದಾಟುವಾಗ ಇದ್ದಕ್ಕಿದ್ದಂತೆ ಬಸ್ ಬರುವುದನ್ನು ಗಮನಿಸದೆ ಬಸ್ ಚಕ್ರಕ್ಕೆ ಸಿಲುಕಿದ್ದಾನೆ. ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಗಾಯಾಳುವನ್ನು ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲಿಯೆ ಪ್ರಾಣವನ್ನು ಬಿಟ್ಟಿದ್ದಾನೆ.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಶವದ ಅಂತ್ಯಸಂಸ್ಕಾರ ಬಳ್ಳೇಕೆರೆ ಗ್ರಾಮದಲ್ಲಿ ನಡೆಯಿತು.
ಕೆಎಸ್ಆರ್ಟಿಸಿ ಬಸ್ ಚಾಲಕ ಸ್ವಲ್ಪ ಮುಂಜಾಗರೂಕತೆ ತೆಗೆದುಕೊಂಡಿದ್ದರೆ ಈ ಅಪಘಾತವನ್ನು ತಪ್ಪಿಸಬಹುದಾಗಿತ್ತು. ಪಟ್ಟಣದಲ್ಲಿ ಫುಟ್ಪಾತ್ ನದ್ದೆ ದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕರು ರಸ್ತೆಯನ್ನು ದಾಟುವುದೆ ಕಷ್ಟಕರವಾಗಿದೆ. ಫುಟ್ಪಾತ್ ನಲ್ಲಿ ಜಾಗವಿಲ್ಲದೆ ಜನರು ರಸ್ತೆಯಲ್ಲಿಯೆ ಓಡಾಡಬೇಕಿದ ಎಂದು ಸಾರ್ವಜನಿಕರು ದೂರಿದ್ದಾರೆ.