ತುರೆಮಣೆಯಿಂದ ಕೊಯ್ದು ಪತ್ನಿಯ ಕೊಂದು ಪಾರ್ಕಲ್ಲಿ ಮಲಗಿದ್ದ ಗಂಡ ಸೆರೆ!

KannadaprabhaNewsNetwork |  
Published : Jan 26, 2024, 01:46 AM IST
ಪೋಟೋ 5 : ಕೊಲೆ ಮಾಡಿದ ಆರೋಪಿ ರಮೇಶ್ | Kannada Prabha

ಸಾರಾಂಶ

ತುರೆಮಣೆಯಿಂದ ಕೊಯ್ದು ಪತ್ನಿಯ ಕೊಂದು ಪಾರ್ಕಲ್ಲಿ ಮಲಗಿದ್ದ ಗಂಡ ಸೆರೆ! ಅಕ್ರಮ ಸಂಬಂಧ ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಅಕ್ರಮ ಸಂಬಂಧ ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಗೋರಿನಬೆಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾಗ್ಯಮ್ಮ (31) ಮೃತ ದುರ್ದೈವಿ, ಮೃತನ ಪತಿ ರಮೇಶ್ (35) ಕೊಲೆ ಮಾಡಿದ ಆರೋಪಿ.

ಮೈಸೂರು ಮೂಲದ ಭಾಗ್ಯಮ್ಮ ಆರೋಪಿ ರಮೇಶ್‌ನಿಗೆ ಮೈಸೂರಿನಲ್ಲಿ ಹನುಮಂತು ಪಲಾವ್ ಬಿರಿಯಾನಿ ಹೋಟೆಲಿನಲ್ಲಿ ಆಕಸ್ಮಿಕವಾಗಿ ಪರಿಚಯವಾಗಿತ್ತು. ನಂತರ ಇಬ್ಬರು ಪ್ರೀತಿಸಿ ನಾಲ್ಕು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ನಂತರ ಗೋರಿನಬೆಲೆಯಲ್ಲಿ ವಾಸವಾಗಿದ್ದರು.

ಭಾಗ್ಯಮ್ಮ ಬ್ಯೂಟಿಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಅನ್ಯ ಪುರುಷನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದ್ದು, ಈ ವಿಷಯ ಗೊತ್ತಾಗಿ ಗಂಡ ರಮೇಶ್ ಕೆಲವು ದಿನಗಳಿಂದಲೂ ಜಗಳವಾಗುತ್ತಿತ್ತು ಎನ್ನಲಾಗಿದೆ.

ರಮೇಶ್ ಮೈಸೂರಿನಲ್ಲಿದ್ದ ಭಾಗ್ಯಮ್ಮಳನ್ನು ಗೋರಿನಬೆಲೆಗೆ ಕರೆದುಕೊಂಡು ಬಂದಿದ್ದ. ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಹೆಂಡತಿಯನ್ನು ತುರೆಮಣೆಯಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ.ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು ಎನ್ನಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ರಮೇಶ್ ನೆಲಮಂಗಲ ಪಟ್ಟಣದ ಟೌನ್ ಪಾರ್ಕ್ ನಲ್ಲಿ ಬಂದು ಮಲಗಿದ್ದಾನೆ. ರಕ್ತದ ಕಲೆ ನೋಡಿ ಪೊಲೀಸರು ಈತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಹೆಂಡತಿಯನ್ನು ಕೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!