ಕನ್ನಡಪ್ರಭ ಸಿನಿವಾರ್ತೆ ‘ಮನೆ ದೇವ್ರು’, ‘ಹಾಲುಂಡ ತವರು’, ‘ಕರುಳಿನ ಕೂಗು’ ಸಿನಿಮಾಗಳನ್ನು ನಿರ್ಮಿಸಿದ್ದ ಆಂಧ್ರ ಮೂಲದ ನಿರ್ಮಾಪಕ ವೈಜಾಕ್ ರಾಜು ಪುತ್ರ ಕಾರ್ತಿಕ್ ರಾಜು ‘ಅಥರ್ವ’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ಮಹೇಶ್ ರೆಡ್ಡಿ ನಿರ್ದೇಶನ, ಸುಭಾಷ್ ನೂತಲಪಾಟಿ ನಿರ್ಮಾಣದ ಚಿತ್ರವಿದು. ನಿರ್ಮಾಪಕ ಮಾರ್ಸ್ ಸುರೇಶ್ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಪತ್ರಕರ್ತೆ ಪಾತ್ರದಲ್ಲಿ ಸಿಮ್ರಾನ್ ನಟಿಸಿದ್ದಾರೆ. ‘ನಾನು ಪುನೀತ್ ರಾಜ್ಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದೇನೆ. ಈಗ ನಾಯಕ ನಟನಾಗಿ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಕಾರ್ತಿಕ್ ರಾಜು ಹೇಳಿಕೊಂಡರು.