ಬಘೀರ ಎಂದರೆ ರಾತ್ರಿ ಬೇಟೆಗಾರ: ನಿರ್ದೇಶಕ ಸೂರಿ

KannadaprabhaNewsNetwork |  
Published : Oct 23, 2024, 12:34 AM ISTUpdated : Oct 23, 2024, 12:35 AM IST
ಬಘೀರ | Kannada Prabha

ಸಾರಾಂಶ

ಬಘೀರ ಎಂದರೆ ರಾತ್ರಿ ಬೇಟೆಗಾರ. ಇದರಲ್ಲಿ ನಾಯಕ ರಾತ್ರಿ ವೇಳೆಗೇ ಕಾರ್ಯಾಚರಿಸುತ್ತಾನೆ ಎಂದು ನಿರ್ದೇಶಕ ಡಾ ಸೂರಿ ತಮ್ಮ ಸಿನಿಮಾದ ಬಘೀರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

‘ಬಘೀರ ಎಂದರೆ ನೈಟ್‌ ಹಂಟರ್‌. ನಮ್ಮ ನಾಯಕನ ಬೇಟೆಯೂ ರಾತ್ರಿ ಹೊತ್ತಲ್ಲೇ. ಹೀಗಾಗಿ ಚಿತ್ರದ ಕಥೆಯ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ತರಹದ ಕಥೆ ನನ್ನ ಪ್ರಕಾರ ಕನ್ನಡದಲ್ಲಿ ಬಂದಿಲ್ಲ.‌’

- ಹೀಗಂದಿದ್ದು ನಿರ್ದೇಶಕ ಡಾ.ಸೂರಿ. ಇತ್ತೀಚೆಗೆ ನಡೆದ ಶ್ರೀಮುರಳಿ ಹಾಗೂ ರುಕ್ಮಿಣೀ ವಸಂತ್‌ ನಟನೆಯ ‘ಬಘೀರ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ ಸೂರಿ ಮಾತನಾಡಿದರು.

ನಾಯಕ ಶ್ರೀಮುರಳಿ, ‘ಸೂಪರ್ ಹೀರೋ ಪಾತ್ರದಲ್ಲಿ ನನ್ನನ್ನು ತೆರೆ ಮೇಲೆ ನೋಡಿ ಬಹಳ ಖುಷಿಯಾಯಿತು. ಟ್ರೇಲರ್‌ನಲ್ಲೇ ಚಿತ್ರದ ಶ್ರೇಷ್ಠತೆಯ ಸುಳಿವು ಸಿಗುತ್ತದೆ. ಈ ಸಿನಿಮಾದ ತಂತ್ರಜ್ಞರು ಕೆಲಸದಲ್ಲಿ ರಾಕ್ಷಸರು. ಪ್ರಶಾಂತ್ ನೀಲ್ ಅದ್ಭುತ ಕಥೆ ಕೊಟ್ಟಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ’ ಎಂದು ತಿಳಿಸಿದರು.

ನಾಯಕಿ ರುಕ್ಮಿಣಿ ವಸಂತ್‌, ‘ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದರು. ಅಕ್ಟೋಬರ್ 31ಕ್ಕೆ ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾ ಬಿಡುಗಡೆಯಾಗಲಿದೆ. ಸುಧಾರಾಣಿ, ಪ್ರಮೋದ್ ಶೆಟ್ಟಿ, ಗರುಡ ರಾಮ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಾರ್ಯಕ್ರಮದಲ್ಲಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌