ಕನ್ನಡಪ್ರಭ ಸಿನಿವಾರ್ತೆ
ಚಿತ್ರದ ಕುರಿತು ದುನಿಯಾ ವಿಜಯ್, ‘ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವ ಕತೆ ಈ ಚಿತ್ರದಲ್ಲಿದೆ. ಪ್ರತಿಯೊಂದು ಮನೆಯಲ್ಲೂ ಹುಟ್ಟಿಕೊಂಡಿರುವ ಮತ್ತು ಹುಟ್ಟಿಕೊಳ್ಳಬಹುದಾದ ಸಮಸ್ಯೆಯ ಸುತ್ತ ಈ ಸಿನಿಮಾ ಮಾತನಾಡುತ್ತದೆ. ಹೀಗಾಗಿ ಇದು ಎಲ್ಲಾ ವರ್ಗದ ಪ್ರೇಕ್ಷಕರ ಸಿನಿಮಾ’ ಎಂದರು.
ಕೃಷ್ಣಸಾರ್ಥಕ್ ಮತ್ತು ಜಗದೀಶ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್, ಆರ್ಎಸ್ ಗೌಡ, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ತರುಣ್ ಸುಧೀರ್, ಗುರು ದೇಶಪಾಂಡೆ, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ, ಕವಿರಾಜ್, ಅರಸು ಅಂತಾರೆ ಇದ್ದರು. ನಾಯಕಿ ಅಶ್ವಿನಿ, ಡ್ರ್ಯಾಗನ್ ಮಂಜು, ಸಂಗಿತ ನಿರ್ದೇಶಕ ಚರಣ್ರಾಜ್ ಸಿನಿಮಾ ಕುರಿತು ಭರವಸೆ ವ್ಯಕ್ತಪಡಿಸಿದರು.