ಶಿವಮೊಗ್ಗ : ಕಾಂತಾರಾ ಸಿನಿಮಾ ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅವರ ತಂಡ ಅಪಾಯದಿಂದ ಪಾರಾಗಿದೆ. ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದೆ.
ಈ ಪ್ರದೇಶದಲ್ಲಿ ಕಾಂತಾರ-2 ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶನಿವಾರ ಸಂಜೆ ಶೂಟಿಂಗ್ ಮುಗಿಸಿ ದೋಣಿಯಲ್ಲಿ ವಾಪಸ್ಸು ಹಿಂತಿರುಗುತಿದ್ದ ವೇಳೆ ಕ್ಯಾಮೆರಾ ಒಂದು ದೋಣಿಯಿಂದ ಜಾರಿತು ಎನ್ನಲಾಗಿದ್ದು, ಇದನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ದೋಣಿ ಆಯತಪ್ಪಿದೆ. ದೋಣಿಯಲ್ಲಿದ್ದ ರಿಷಬ್ ಶೆಟ್ಟಿ ಸೇರಿದಂತೆ ಐದಾರು ಜನ ನೀರಿಗೆ ಬಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಬಹುತೇಕ ದಡದ ಸಮೀಪ ಬಂದಿದ್ದರಿಂದ ನೀರಿಗೆ ಬಿದ್ದವರು ಆರಾಮವಾಗಿ ದಡ ಸೇರಿದ್ದಾರೆ.
ಒಂದು ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಯಾವುದೇ ಅನಾಹುತ ನಡೆಯದೆ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಈ ಸಿನಿಮಾ ಚಿತ್ರೀಕರಣ ಶುರುವಾದಾಗಿನಿಂದ ಒಂದಿಲ್ಲೊಂದು ಅವಘಡ ಸಂಭವಿಸುತ್ತಿದ್ದು, ಇದಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾದಂತಾಗಿದೆ.