ಹೊಸಬರ ತಂಡದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದೆ. ಹರಿಪ್ರಾಣ ರಚಿಸಿ, ನಿರ್ದೇಶಿಸಲಿದ್ದು, ಪ್ರಾಣ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಿಸಲಿದ್ದಾರೆ. ಉಮೇಶ್ ನಿರ್ಮಾಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಜೂ.ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್, ರಜನಿಕಾಂತ್, ರೇಣುಕಾ ಪ್ರಸಾದ್, ಚಂದ್ರಪ್ರಭ, ಕುರಿ ಪ್ರತಾಪ್ ಚಿತ್ರದ ನಾಯಕರು
ಕನ್ನಡಪ್ರಭ ಸಿನಿವಾರ್ತೆ
ಹೊಸಬರ ತಂಡದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದೆ. ಹರಿಪ್ರಾಣ ರಚಿಸಿ, ನಿರ್ದೇಶಿಸಲಿದ್ದು, ಪ್ರಾಣ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಿಸಲಿದ್ದಾರೆ. ಉಮೇಶ್ ನಿರ್ಮಾಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಜೂ.ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್, ರಜನಿಕಾಂತ್, ರೇಣುಕಾ ಪ್ರಸಾದ್, ಚಂದ್ರಪ್ರಭ, ಕುರಿ ಪ್ರತಾಪ್ ಚಿತ್ರದ ನಾಯಕರು. ಪೂಜಾ ರಾಮಚಂದ್ರ ಹಾಗೂ ಮಾನಸ ಗೌಡ ಚಿತ್ರದ ನಾಯಕಿಯರು. ಪುನೀತ್, ಜ್ಯೋತಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಹರಿಪ್ರಾಣ, ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ’ ಎಂದರು. ಜೆ ರಂಗಸ್ವಾಮಿ ಕ್ಯಾಮೆರಾ ಚಿತ್ರಕ್ಕಿದೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.