ರತ್ನ ಚಿತ್ರದ ಟ್ರೇಲರ್‌ ಬಿಡುಗಡೆ

KannadaprabhaNewsNetwork |  
Published : Mar 19, 2024, 12:53 AM IST
ರತ್ನ  | Kannada Prabha

ಸಾರಾಂಶ

ರತ್ನ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಸಾಕಷ್ಟು ವಿಶೇಷತೆಗಳಿಂದ ಈ ಸಿನಿಮಾ ಕೂಡಿದೆ.

ಕನ್ನಡಪ್ರಭ ಸಿನಿವಾರ್ತೆ

ಬಸವರಾಜ್‌ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ‘ರತ್ನ’ ಚಿತ್ರದ ಟ್ರೇಲರ್‌ ಅನಾವರಣಗೊಂಡಿದೆ. ಆನಂದ್‌ ಅಪ್ಪು, ಹರ್ಷಲ ಹನಿ, ವರ್ಧನ್‌ ನಟಿಸಿರುವ ಚಿತ್ರವಿದು. ‘ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದ್ದೇವೆ. ಇದು ನಾವು ಅವರಿಗೆ ಸಲ್ಲಿಸುವ ಗೌರವ’ ಎಂದು ಬಸವರಾಜ್‌ ಬಳ್ಳಾರಿ ಹೇಳಿಕೊಂಡರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ಕೆ ವಿಶ್ವನಾಥ್‌ ಟ್ರೇಲರ್‌ ಬಿಡುಗಡೆ ಮಾಡಿದರು. ನಾಗೇಂದ್ರ ಅರಸ್‌, ಆನಂದ್‌ ಅಪ್ಪು, ವರ್ಧನ್‌, ಅಮಿತ್‌ ರಾವ್‌ ಇದ್ದರು. ಬಾಲರಾಜ್‌ ಒಡೆಯರ್‌, ಸಾರಿಕಮ್ಮ, ಅಮಿತ್‌ ರಾವ್‌, ರಾಣಿ ಬಸವರಾಜ್‌, ರಾಮು ಕರೂರ್‌, ಸುಚಿತ್‌ ಚೌಹಾಣ್‌, ಮಂಜು ದೈವಜ್ಞ ನಟಿಸಿದ್ದಾರೆ. ಸತೀಶ್‌ ಬಾಬು ಸಂಗೀತ ಸಂಯೋಜನೆ, ಸತೀಶ್‌ ಗಂಗಾವತಿ ಛಾಯಾಗ್ರಹಣ ಚಿತ್ರಕ್ಕಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ : ಸುದೀಪ್‌