‘ಮೊದಲು ಈ ಸಿನಿಮಾದ ಕಥೆ ಕೇಳಿ ಮಾಡಬೇಕಾ ಬೇಡವಾ ಅಂತ ಯೋಚನೆ ಮಾಡಿದ್ದೆ. ಯಾಕೆಂದರೆ ಈ ರೀತಿಯ ಪಾತ್ರ ನಾನು ಈ ಹಿಂದೆ ಮಾಡಿಲ್ಲ. ಹೀಗಾಗಿ ಇಂಥ ಪಾತ್ರದಲ್ಲಿ ಪ್ರೇಕ್ಷಕರು ನನ್ನ ನೋಡುತ್ತಾರೆಯೇ ಎನ್ನುವ ಭಯ ಇತ್ತು. ಆದರೆ ಕಥೆ ಇಷ್ಟ ಆಗಿ ಒಪ್ಪಿಕೊಂಡೆ’.
ನಿರ್ದೇಶಕ ಶ್ರೀಧರ್ ಶಾಸ್ತ್ರಿ, ‘ಒಂದೇ ಮನೆಯಲ್ಲಿ ನಡೆಯುವ ಕ್ರೈಮ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಚಿತ್ರವಿದು. ಲಾಕ್ಡೌನ್ ಕಾಲದ ಕತೆಯನ್ನು ಇಟ್ಟುಕೊಂಡು ಮಾಡಿದ್ದು, 5 ಪ್ರಮುಖ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ತಿಲಕ್, ರಾಕೇಶ್ ಮಯ್ಯ, ಸೋನು ಗೌಡ ನಟಿಸಿರುವ ಈ ಚಿತ್ರ ನಿರೀಕ್ಷೆ ಹುಟ್ಟಿಸಿದೆ. ಗಿರೀಶ್ ಹೊತೂರ್ ಸಂಗೀತ, ಮನೋಹರ್ ಕ್ಯಾಮೆರಾ ಚಿತ್ರಕ್ಕಿದೆ.