ಬೆಂಗಳೂರಿನ ನಗರ ನಕ್ಸಲರಿಂದ ಮಹಾ ಅಭಿವೃದ್ಧಿಗೆ ಅಡ್ಡಿ : ಫಡ್ನವೀಸ್‌

KannadaprabhaNewsNetwork |  
Published : Jul 23, 2025, 01:46 AM ISTUpdated : Jul 23, 2025, 05:46 AM IST
ಫಡ್ನವೀಸ್‌  | Kannada Prabha

ಸಾರಾಂಶ

ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

 ಗಢ್‌ಚಿರೋಲಿ: ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

ಮಂಗಳವಾರ ಗಢ್‌ಚಿರೋಲಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬೇರೆ ರಾಜ್ಯಗಳ ನಗರ ನಕ್ಸಲರು ವಿದೇಶಗಳಿಂದ ದೇಣಿಗೆ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗಢ್‌ಚಿರೋಲಿ ಜನರನ್ನು ಅಭಿವೃದ್ಧಿ ಮಾರ್ಗದಿಂದ ದೂರವಿಡುತ್ತಿದ್ದಾರೆ. ಇಬ್ಬರು ಕರ್ನಾಟಕದ ಬೆಂಗಳೂರು ಹಾಗೂ ಇನ್ನಿಬ್ಬರು ಕೋಲ್ಕತಾದಲ್ಲಿ ಕುಳಿತು ನಮ್ಮ ಜನರನ್ನು ಸಂವಿಧಾನದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ