26/11 ಮುಂಬೈ ದಾಳಿಯ ಉಗ್ರರಿಗೆ ಪಾಕ್‌ನ ಶೌರ್ಯ ಪ್ರಶಸ್ತಿ ನೀಡಿ ಎಂದಿದ್ದ ತಾಹಾವುರ್‌ ರಾಣಾ

KannadaprabhaNewsNetwork |  
Published : Apr 12, 2025, 12:46 AM ISTUpdated : Apr 12, 2025, 07:06 AM IST
ಹೆಡ್ಲಿ | Kannada Prabha

ಸಾರಾಂಶ

26/11 ಮುಂಬೈ ದಾಳಿಯ ಉಗ್ರ ತಾಹಾವುರ್‌ ರಾಣಾ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದಂತೆ ಆತನ ಕುರಿತ ಕೆಲ ಆಘಾತಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ.

 ವಾಷಿಂಗ್ಟನ್‌/ನವದೆಹಲಿ: 26/11 ಮುಂಬೈ ದಾಳಿಯ ಉಗ್ರ ತಾಹಾವುರ್‌ ರಾಣಾ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದಂತೆ ಆತನ ಕುರಿತ ಕೆಲ ಆಘಾತಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ. ದಾಳಿ ಮಾಡಿದ ಉಗ್ರರಿಗೆ ಪಾಕ್‌ನ ಶೌರ್ಯ ಪ್ರಶಸ್ತಿ ನೀಡಬೇಕು ಎಂದಿದ್ದ ಆತ, ಮುಂಬೈ ದಾಳಿ ಬಳಿಕ ‘ಭಾರತೀಯರಿಗೆ ಶಾಸ್ತಿ ಆಗಿದೆ’ ಎಂದಿದ್ದ ಎಂದು ಅಮೆರಿಕ ಹೇಳಿದೆ.

ರಾಣಾನ ಹಸ್ತಾಂತರ ಕುರಿತ ಅಧಿಕೃತ ಹೇಳಿಕೆಯಲ್ಲಿ, ಸಂಚುಕೋರರಲ್ಲಿ ಒಬ್ಬನಾದ ಡೇವಿಡ್‌ ಹೆಡ್ಲಿ ಹಾಗೂ ರಾಣಾನ ನಡುವಿನ ದೂರವಾಣಿ ಸಂಭಾಷಣೆಯ ಬಗ್ಗೆ ಅಮೆರಿಕ ಮಾಹಿತಿ ನೀಡಿದೆ.

‘ಮುಂಬೈನ 12 ಕಡೆಗಳಲ್ಲಿ 10 ಎಲ್‌ಇಟಿ ಉಗ್ರರು ನಡೆಸಿದ ದಾಳಿಗೆ 166 ಜನ ಸಾವನ್ನಪ್ಪಿದ ಬೆನ್ನಲ್ಲೇ, ‘ಭಾರತೀಯರಿಗೆ ಹೀಗೇ ಆಗಬೇಕಿತ್ತು. ತಕ್ಕ ಶಾಸ್ತಿ ಆಯಿತು’ ಎಂದು ರಾಣಾ ಹೇಳಿದ್ದ. ಜತೆಗೆ, ‘26/11ರ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ 9 ಲಷ್ಕರ್‌ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ನಿಶಾನ್‌ ಎ ಹೈದರ್‌’ ಅನ್ನು ನೀಡಬೇಕು’ ಎಂದು ರಾಣಾ, ಹೆಡ್ಲಿಗೆ ಹೇಳಿದ್ದ ಎಂಬ ವಿಷಯ ಅದರಲ್ಲಿದೆ.

ಈ ನಡುವೆ, ಭಾರತವು ನಡೆಸಲಿರುವ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಅಮೆರಿಕ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ