ವಿಧಾನ ಪರಿಷತ್‌ ಕಲಾಪ ಮುಂದೂಡಿದ ಬಳಿಕ ನೀಡಿದ ಹೇಳಿಕೆ ಸಭಾಪತಿ ವ್ಯಾಪ್ತಿಗೆ ಬರೋಲ್ಲ

KannadaprabhaNewsNetwork |  
Published : Dec 21, 2024, 01:16 AM ISTUpdated : Dec 21, 2024, 04:48 AM IST
ಸದನ | Kannada Prabha

ಸಾರಾಂಶ

ವಿಧಾನ ಪರಿಷತ್‌ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪ ಬಂದಿದೆ. ಹೀಗಾಗಿ ಪ್ರಕರಣ ಸಭಾಪತಿಗಳಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವೂ ಕೇಳಿ ಬಂದಿದೆ.

 ಬೆಂಗಳೂರು : ವಿಧಾನ ಪರಿಷತ್‌ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪ ಬಂದಿದೆ. ಹೀಗಾಗಿ ಪ್ರಕರಣ ಸಭಾಪತಿಗಳಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವೂ ಕೇಳಿ ಬಂದಿದೆ.

ಕಲಾಪ ನಡೆಯುತ್ತಿರುವಾಗ ಸದಸ್ಯರು ಯಾವ ರೀತಿ ಮಾತನಾಡಬೇಕು? ಯಾರು ಮಾತನಾಡಬೇಕು? ನಿಯಮ ಉಲ್ಲಂಘಿಸಿ ಮಾತನಾಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಸಭಾಪತಿಗಳಿಗೆ ಇರುತ್ತದೆ. ಆದರೆ, ಗುರುವಾರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸಿ.ಟಿ. ರವಿ ನಿಂದನೆ ಮಾಡಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ವಿಧಾನಸೌಧಕ್ಕೆ ಬಂದು ಸಭಾಪತಿಗಳಿಗೆ ಮಾಹಿತಿ ನೀಡಿ ನೇರವಾಗಿ ಸಿ.ಟಿ. ರವಿ ಅವರನ್ನು ಬಂಧಿಸಿದ್ದಾರೆ.

ಒಂದೊಮ್ಮೆ ಕಲಾಪ ನಡೆಯುತ್ತಿರುವಾಗ ಇಂತಹ ಹೇಳಿಕೆ ನೀಡಿದ್ದರೆ ಸಭಾಪತಿಗಳು ಸದಸ್ಯರ ದೂರು ಆಧರಿಸಿ ಹಕ್ಕು ಬಾಧ್ಯತಾ ಸಮಿತಿ ಅಥವಾ ನೈತಿಕ ಸಮಿತಿಗೆ ಶಿಫಾರಸು ಮಾಡುತ್ತಿದ್ದರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ