- ಮೊಘಲ್ ದೊರೆಗಳಿಂದ ನಿರ್ದಯ ಆಡಳಿತ
-ಶಿವಾಜಿ ‘ಚತುರ ತಂತ್ರಗಾರ’ ಎಂದು ವರ್ಣನೆ
ನವದೆಹಲಿ: ಎನ್ಸಿಇಆರ್ಟಿ ಬಿಡುಗಡೆ ಮಾಡಿರುವ 8ನೇ ತರಗತಿ ಹೊಸ ಪಠ್ಯಪುಸ್ತಕದಲ್ಲಿ (ಕೇಂದ್ರೀಯ ಪಠ್ಯ) ದೆಹಲಿ ಸುಲ್ತಾನರು, ಮೊಘಲರು, ಮರಾಠರು, ವಿಜಯನಗರ ಸಾಮ್ರಾಜ್ಯ ಹಾಗೂ ವಸಾಹತುಶಾಹಿ ಆಡಳಿತದ ಕುರಿತು ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.
ಶಿವಾಜಿ ಗುಣಗಾನ:ಶಿವಾಜಿ ಮಹಾರಾಜರು ‘ಚತುರ ತಂತ್ರಗಾರ’ರಾಗಿದ್ದರು. ಪರಧರ್ಮ ಸಹಿಷ್ಣುವಾಗಿದ್ದು, ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದಿದ್ದರು ಎಂದು ವರ್ಣಿಸಲಾಗಿದೆ. ಅಕ್ಬರನ ವಿರುದ್ಧ ಹೋರಾಡಿದ ರಾಣಿ ದುರ್ಗಾವತಿ, ಮೇವಾರದ ರಾಜ ಮಹಾರಾಣಾ ಪ್ರತಾಪ್, ಔರಂಗಜೇಬನಿಗೆ ಪ್ರತಿರೋಧವನ್ನೊಡ್ಡಿದ ಅಹೋಮರ ಕುರಿತಾಗಿಯೂ ಮಾಹಿತಿ ನೀಡಲಾಗಿದೆ.
==ಕೇಂದ್ರೀಯ ಪಠ್ಯದಲ್ಲಿ ಆಚಾರ್ಯ ಕಣಾದ, 2ನೇ ಭಾಸ್ಕರನ ಬಗ್ಗೆ ಪಠ್ಯ
-ಆಧುನಿಕ ವಿಜ್ಞಾನ, ಇಸ್ರೋ, ಕೋವಿಡ್ ಲಸಿಕೆ ಕುರಿತೂ ಮಾಹಿತಿನವದೆಹಲಿ: ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಜ್ಞಾನದ ಜೊತೆಗೆ ಸಮಕಾಲೀನ ವಿಜ್ಞಾನವನ್ನೂ ಕಲಿಸುವ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) 8ನೇ ತರಗತಿ ಪಠ್ಯಪುಸ್ತಕದಲ್ಲಿ ಹೊಸ ಪಾಠಗಳನ್ನು ಅಳವಡಿಸಿದೆ. ಪರಮಾಣು ಕಲ್ಪನೆಯ ಪ್ರವರ್ತಕ ಆಚಾರ್ಯ ಕಣಾದ, ಪ್ರಾಚೀನ ವೈದ್ಯಪದ್ಧತಿ, ಪ್ರಾಚೀನ ಕಾಲದ ಬಾಹ್ಯಾಕಾಶ ಸಂಶೋಧನೆ ಮೊದಲಾದ ವಿಷಯಗಳ ಜೊತೆಗೆ ಆಧುನಿಕ ಕಾಲದ ಇಸ್ರೋ, ಕೋವಿಡ್-19, ಅಣುವಿಜ್ಞಾನಗಳ ಕುರಿತ ಪಾಠಗಳನ್ನು ಸೇರ್ಪಡೆಗೊಳಿಸಲಾಗಿದೆ.ಆಧುನಿಕ ಲಸಿಕೆಗಳು ಬರುವುದಕ್ಕೂ ಪೂರ್ವದಲ್ಲಿ, ಭಾರತವು ಸಿಡುಬಿನಿಂದ ರಕ್ಷಿಸಲು ವೇರಿಯೊಲೇಷನ್ ಎಂಬ ಸಾಂಪ್ರದಾಯಿಕ ವಿಧಾನವನ್ನು ಹೊಂದಿತ್ತು ಎಂಬ ಮಾಹಿತಿ ಹಾಗೂ ಕೋವಿಡ್ ಸಮಯದಲ್ಲಿ ಭಾರತದ ಲಸಿಕೆಗಳು ಜಗತ್ತಿಗೆ ವರದಾನವಾದ ಪರಿಯನ್ನು ‘ಆರೋಗ್ಯ: ಅಂತಿಮ ನಿಧಿ’ ಅಧ್ಯಾಯದಲ್ಲಿ ತಿಳಿಸಲಾಗಿದೆ.
‘ಕಣಗಳ ನಿಜವಾದ ಗುಣಧರ್ಮ’ ಅಧ್ಯಾಯದಲ್ಲಿ, ಪರಮಾಣು ಕಲ್ಪನೆಯ ಬಗ್ಗೆ ಮೊದಲಿಗೆ ತಿಳಿಸಿದ ಪ್ರಾಚೀನ ಭಾರತೀಯ ತತ್ವಜ್ಞಾನಿ ಆಚಾರ್ಯ ಕಣಾದರ ಕುರಿತು ಉಲ್ಲೇಖಿಸಲಾಗಿದೆ. ಮತ್ತೊಂದು ಅಧ್ಯಾಯದಲ್ಲಿ, ಪ್ರಾಚೀನಕಾಲದಲ್ಲಿ ಔಷಧೀಯ ಉದ್ದೇಶಗಳಿಗಾಗಿ ಮಿಶ್ರಲೋಹಗಳನ್ನು ಬಳಸುತ್ತಿದ್ದುದನ್ನು ವಿವರಿಸಲಾಗಿದೆ. ಚಂದ್ರಯಾನ 1, 2, 3, ಆದಿತ್ಯ ಎಲ್1, ಮಂಗಳಯಾನದಂತಹ ಇಸ್ರೋದ ವಿವಿಧ ಕಾರ್ಯಾಚರಣೆಗಳನ್ನು ಸಹ ವಿವರಿಸಲಾಗಿದೆ.800 ವರ್ಷಗಳ ಹಿಂದೆ 2ನೇ ಭಾಸ್ಕರನ ಅವಧಿಯಲ್ಲಿ ಭಾರತೀಯ ಖಗೋಳಶಾಸ್ತ್ರಜ್ಞರು ನೀರಿನ ಬಟ್ಟಲುಗಳು ಮತ್ತು ಕೊಳವೆಗಳನ್ನು ಬಳಸಿ ಆಕಾಶಕಾಯಗಳು ಮತ್ತು ಗ್ರಹಗಳ ಚಲನೆಯನ್ನು ಅರಿಯುತ್ತಿದ್ದ ಕುರಿತು ತಿಳಿಸಿಕೊಡಲಾಗಿದೆ. ಪರಮವೀರ ಚಕ್ರ ಪುರಸ್ಕೃತ ಮೇ. ಸೋಮನಾಥ ಶರ್ಮಾ, ಐತಿಹಾಸಿಕ ಬುಡ್ಗಮ್ ಕದನಗಳ ಕುರಿತೂ ಪಾಠಗಳಿವೆ.